- Advertisement -
- Advertisement -
ಉಡುಪಿ: ಕುಟುಂಬದ ಆಧಾರದಲ್ಲಿ ಸಿಎಂ ಆಗೋದು ಜೆಡಿಎಸ್ ನಲ್ಲಿ ಮಾತ್ರ. ಆ ಪದ್ಧತಿ ಬಿಜೆಪಿಯಲ್ಲಿಲ್ಲ. ನಮ್ಮಲ್ಲಿ ಅರ್ಹತೆ ಇರುವ ಯಾರಾದ್ರೂ ಸಿಎಂ ಆಗ್ಬಹುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಜೆಡಿಎಸ್, ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡ್ತಾರೆ. ಅಭಿವೃದ್ಧಿ ಮುಂದಿಟ್ಟುಕೊಂಡು ಅವ್ರು ಚುನಾವಣೆ ಎದುರಿಸಿಲ್ಲ ಎಂದರು. ಜಾತಿ ಹೆಸರೇಳಿಕೊಂಡು ಅಂತಹ ಕೀಳಾದ ಹೇಳಿಕೆ ಕೊಡೋದು ಕುಮಾರಸ್ವಾಮಿಯವರಿಗೆ ಶೋಭೆ ತರುವಂತದ್ದಲ್ಲ ಎಂದರು.
- Advertisement -