- Advertisement -
- Advertisement -
ಶಿವಮೊಗ್ಗ: ಪಿಂಚಣಿ ಸೌಲಭ್ಯ ಮಾಡಲು ಕಚೇರಿಗೆ ಬಂದಿದ್ದ ವೃದ್ಧೆಯೊಬ್ಬರು ಗಂಟೆ ಗಟ್ಟಲೆ ಸರ್ಕಾರಿ ಅಧಿಕಾರಿಗೆ ಕಾದು- ಕಾದು ಕೊನೆಗೆ ಸುಸ್ತಾಗಿ ಕುಸಿದು ಬಿದ್ದ ಘಟನೆ ಶಿವಮೊಗ್ಗದ ಹೊಸನಗರ ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಸಾಧಮ್ಮ ಎಂಬ ವೃದ್ಧೆ ಬೆಳಿಗ್ಗೆ 9.30ರ ಸುಮಾರಿಗೆ ಪಿಂಚಣಿ ಸೌಲಭ್ಯ ಮಾಡಿಸಲು ನಿಟ್ಟೂರು ಗ್ರಾಮ ಲೆಕ್ಕಿಗರ ಕಚೇರಿಗೆ ಬಂದಿದ್ದಾರೆ. ಅಲ್ಲದೆ ಇದಕ್ಕಾಗಿ ಹೆಬ್ಬಿಗೆಯಿಂದ ನಡೆದುಕೊಂಡೇ ಬಂದಿದ್ದರು. ಆದರೆ ಗ್ರಾಮಲೆಕ್ಕಿಗ ಮಂಜಪ್ಪ ಮಧ್ಯಾಹ್ನವಾದರೂ ಬಾರದ ಕಾರಣ ಕಾದು ಕಾದು ಸುಸ್ತಾದ ಸಾದಮ್ಮ ಅಲ್ಲೆ ಕುಸಿದು ಬಿದ್ದಿದ್ದಾರೆ.
ಇದನ್ನು ಕಂಡ ಸ್ಥಳೀಯರು ವೃದ್ಧೆಯನ್ನು ಕೂಡಲೇ ನಿಟ್ಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಗ್ರಾಮ ಲೆಕ್ಕಿಗರ ವರ್ತನೆ ಬಗ್ಗೆ ಆಕ್ರೋಶಗೊಂಡ ಜನರು ತಹಶೀಲ್ದಾರ್ ಗೆ ಹೇಳಿದ್ದಾರೆ. ತಕ್ಷಣ ತಹಶೀಲ್ದಾರ್ ಎಚ್ಚೆತ್ತು ಗ್ರಾಮಲೆಕ್ಕಿಗನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
- Advertisement -