Friday, May 3, 2024
Homeಕರಾವಳಿಬೆಳ್ತಂಗಡಿ : ಧರ್ಮಸ್ಥಳ ಖಾಸಗಿ ಲಾಡ್ಜ್ ನಲ್ಲಿ ವೃದ್ಧ ಆತ್ಮಹತ್ಯೆ; ಐದು ಮಕ್ಕಳಿದ್ದರೂ ಅನಾಥವಾದ ತಂದೆಯ...

ಬೆಳ್ತಂಗಡಿ : ಧರ್ಮಸ್ಥಳ ಖಾಸಗಿ ಲಾಡ್ಜ್ ನಲ್ಲಿ ವೃದ್ಧ ಆತ್ಮಹತ್ಯೆ; ಐದು ಮಕ್ಕಳಿದ್ದರೂ ಅನಾಥವಾದ ತಂದೆಯ ಮೃತದೇಹ

spot_img
- Advertisement -
- Advertisement -

ಬೆಳ್ತಂಗಡಿ : ಮನೆಯಲ್ಲಿ ಕ್ಷುಲಕ ವಿಚಾರದಲ್ಲಿ ಮಕ್ಕಳ ಜೊತೆ ಗಲಾಟೆ ನಡೆದಿದ್ದು. ನಂತರ ಐದು ಮಕ್ಕಳ ತಂದೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ಖಾಸಗಿ ಲಾಡ್ಜ್ ನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸಕಾಲಕ್ಕೆ ಧರ್ಮಸ್ಥಳ ಪೊಲೀಸರು ಆಸ್ಪತ್ರೆಗೆ ಸೇರಿ ಒಂದು ದಿನದ ಬಳಿಕ ವೃದ್ಧ ಸಾವನ್ನಪ್ಪಿದ್ದಾರೆ. ಪೊಲೀಸರು ಮನೆಯವರಿಗೆ ಕರೆ ಮಾಡಿ ಸಾವನ್ನಪ್ಪಿದ ವಿಚಾರ ತಿಳಿಸಿದರೂ ನಮಗೆ ತಂದೆ ಬೇಡ ,ನಾವು ಬರುವುದಿಲ್ಲ ಎಂದಿದ್ದಾರೆ. ಈಗ ವೃದ್ಧನಿಗೆ ಐದು ಜನ ಮಕ್ಕಳಿದ್ದರೂ ವೃದ್ಧನ ಶವ ಮಂಗಳೂರು ಶವಗಾರದಲ್ಲಿ ಅನಾಥವಾಗಿದೆ.

ಘಟನೆಯ ವಿವರ: ಹೆಚ್.ವಿ.ಚಂದ್ರಶೇಖರ್ ಎಂಬವರು ಮನೆಯಲ್ಲಿ ಕ್ಷುಲಕ ವಿಚಾರದಲ್ಲಿ ಗಲಾಟೆ ನಡೆದಿದೆ.‌ ಈ ಗಲಾಟೆಯಿಂದ ನೊಂದು ಮನೆಬಿಟ್ಟು ಬೆಂಗಳೂರಿನಿಂದ ಬಸ್ ಮೂಲಕ ಧರ್ಮಸ್ಥಳಕ್ಕೆ ಬಂದು ನಂತರ ಜ.17 ರಂದು ಖಾಸಗಿ ಲಾಡ್ಜ್ ನಲ್ಲಿ ರೂಂ ಪಡೆದು . ರೂಂ ನಲ್ಲಿ ವಿಷ ಸೇವಿಸಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನ್ನು ರೂಂ ಬಾಯ್ ನೋಡಿ ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಜ.18 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ‌.

ಮನೆಯವರಿಗೆ ಮಾಹಿತಿ:*

ಧರ್ಮಸ್ಥಳ ಪೊಲೀಸರು ಮೃತಪಟ್ಟ ವೃದ್ಧನ ಬ್ಯಾಗ್ ನಲ್ಲಿದ್ದ ಚೀಟಿ ಹಾಗೂ ಆಧಾರ್ ಕಾರ್ಡ್ ಮೂಲಕ ಮನೆಯವರನ್ನು ಸಂಪರ್ಕಿಸಿ ಸಾವನ್ನಪ್ಪಿದ ವಿಚಾರವನ್ನು ತಿಳಿಸಿದಾಗ ನಮಗೆ ನಮ್ಮ ತಂದೆ ಬೇಡ , ಅವರ ಶವ ನಾವು ತರಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ.

ಮೃತಪಟ್ಟ ವೃದ್ಧನ ಕುಟುಂಬದ ವಿವರ: ಬೆಂಗಳೂರು ಉತ್ತರದ 06,13 ನೇ ‘ಎ’ ಕ್ರಾಸ್ ,ಹೊಯ್ಸಳ ನಗರ , ಸುಂಕದಕಟ್ಟೆ ನಿವಾಸಿ ದಿ.ವೆಂಕಪ್ಪ ಯಾನೆ ಅಪ್ಪಣ್ಣ ಎಂವವರ ಮಗನಾದ ಹೆಚ್.ವಿ.ಚಂದ್ರಶೇಖರ್ (89) ಎಂಬವರಿಗೆ ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇವರ ಹೆಸರು ಶಶಿಕಲಾ , ರಂಗನಾಥ್ (ಕ್ಯಾಟರಿಂಗ್ ಕೆಲಸ) , ವೆಂಕಟೇಶ್, ರಾಮು( ಹೂವಿನ ವ್ಯಾಪಾರ) ,ಸವಿತಾ ಸೇರಿ ಐದು ಮಕ್ಕಳು ಇದ್ದಾರೆ.

ಅನಾಥವಾಗಿರುವ ವೃದ್ಧನ ಮೃತದೇಹ: ಧರ್ಮಸ್ಥಳ ಪೊಲೀಸರು ಐದು ಜನ ಮಕ್ಕಳನ್ನು ಸಂಪರ್ಕಿಸಿದರೂ ಯಾರು ಕೂಡ ಮೃತದೇಹ ಪಡೆದುಕೊಳ್ಳಲು ಬರುವುದಕ್ಕೆ ನಿರಾಕರಿಸುತ್ತದ್ದು. ಮೃತದೇಹದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಅನಾಥವಾಗಿದೆ.

- Advertisement -
spot_img

Latest News

error: Content is protected !!