ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಹಿನ್ನೆಲೆ ಬಹುತೇಕ ಎಲ್ಲಾ ಶಾಸಕರು ಬೆಂಗಳೂರಿನಲ್ಲಿದ್ದಾರೆ. ಕರಾವಳಿ ಶಾಸಕರು ಅಧಿವೇಶನದ ಹಿನ್ನೆಲೆ ರಾಜಧಾನಿಯಲ್ಲಿದ್ದಾರೆ. ಕರಾವಳಿಗರು ಎಲ್ಲೆ ಹೋಗ್ಲಿ ಮೊದಲು ಹುಡುಕೋದು ಕುಚಲಕ್ಕಿ ಅನ್ನ ಎಲ್ಲಿ ಸಿಗುತ್ತೆ ಅಂತಾ. ಇದಕ್ಕೆ ನಮ್ಮ ಶಾಸಕರು ಹೊರತಾಗಿಲ್ಲ,
ಬೆಂಗಳೂರಿನಲ್ಲಿದ್ದಾಗಲೂ ಕುಚಲಕ್ಕಿಯ ಅನ್ನವನ್ನೇ ಸೇವಿಸುವ ಕರಾವಳಿ ಶಾಸಕರು ಸದಾ ಖಡಕ್ ರೊಟ್ಟಿ, ಚಟ್ನಿ ಪುಡಿ ತಿನ್ನೋ ಉತ್ತರ ಕರ್ನಾಟಕದ ಶಾಸಕರಿಗೆ ನಮ್ಮ ಕರಾವಳಿಯ ಕುಚಲಕ್ಕಿ ಸವಿ ತೋರಿಸಿದ್ದಾರೆ.
ಹೌದು.. ವಿಧಾನ ಸೌಧದಲ್ಲಿ ಇಂದು ಉತ್ತರ ಕರ್ನಾಟಕದ ಶಾಸಕ ಮಿತ್ರರಿಗೆ ಕಾರ್ಲ ಕಜೆ ಅಕ್ಕಿಯ ವಿಶೇಷತೆ ತಿಳಿಸಿ ಅವರಿಗೆ ಕರಾವಳಿ ಶಾಸಕರಾದ ಸುನೀಲ್ ಕುಮಾರ್ ಹಾಗೂ ರಾಜೇಶ್ ನಾಯ್ಕ್ ಅದರ ರುಚಿ ತೋರಿಸಿದ್ದಾರೆ. ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್. ಮಧ್ಯಾಹ್ನ ಉತ್ತರ ಕರ್ನಾಟಕದ ಶಾಸಕ ಜೊತೆ ಊಟ ಮಾಡಿದ್ದಾರೆ. ಇನ್ನು ಕಜೆ ಅಕ್ಕಿ ರುಚಿಗೆ ಉತ್ತರ ಕರ್ನಾಟಕದ ಶಾಸಕರು ಮಾರು ಹೋಗಿದ್ದಾರೆ ಎನ್ನಲಾಗಿದೆ.