- Advertisement -
- Advertisement -
ಬೆಂಗಳೂರು : ರಾಜ್ಯದಲ್ಲಿ ಲೌಕ್ ಡೌನ್ ಇದ್ದಾಗ ಸಾಕಷ್ಟು ತೊಂದರೆ ಅನುಭವಿಸಿದವರು ಯಾರು ಅಂತಾ ಪಟ್ಟಿ ಮಾಡುತ್ತಾ ಹೋದ್ರೆ ಅದರಲ್ಲಿ ಮೊದಲಿಗೆ ಬರುವವರೇ ಮದ್ಯಪ್ರಿಯರು. ಲೌಕ್ ಡೌನ್ ವೇಳೆ ಎಣ್ಣೆಗಾಗಿ ಕುಡುಕರು ಪಟ್ಟ ಪಾಡು ಹೇಳ ತೀರದು. ಕೆಲವರ ಅವಸ್ಥೆಯಂತೂ ದೇವರಿಗೆಯೇ ಪ್ರೀತಿ.
ಇದೀಗ ಮತ್ತೆ ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಬೇಸರದ ಸುದ್ದಿಯೊಂದನ್ನು ಹೇಳಿದೆ. ಮುಂದಿನ ಭಾನುವಾರದಿಂದ ಅಂದ್ರೆ ಜುಲೈ 05ರಿಂದ ಪ್ರತಿ ಭಾನುವಾರವೂ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಾಗಾಗಿ ಇನ್ಮುಂದೆ ಭಾನುವಾರದಂದೂ ಮದ್ಯದಂಗಡಿಗಳು ಓಪನ್ ಇರಲ್ಲ. ಹಾಗಾಗಿ ಭಾನುವಾರ ಎಣ್ಣೆ ಪ್ರಿಯರಿಗೆ ಎಣ್ಣೆ ಸಿಗಲ್ಲ. ಆದ್ರೆ ಭಾನುವಾರ ಸಿಗದೇ ಇದ್ದರೇನಂತೆ ಶನಿವಾರವೇ ಸ್ಟಾಕ್ ಮಾಡಿಕೊಳ್ತೀವಿ ಅಂತಿದ್ದಾರೆ ಮದ್ಯಪ್ರಿಯರು.
- Advertisement -