ಬೆಂಗಳೂರು: ನಿಖಿಲ್ ರೇವತಿ ಮದುವೆಯಾಗಿರುವುದು ನಿಮ್ಮೆಲ್ಲರಿಗೆ ಗೊತ್ತಿದೆ.ರೇವತಿ ಅವರ ಇನ್ನೊಂದು ಹೆಸರು ರೀತು ಮಂಜುನಾಥ್. ಇವರನ್ನು ಮನೆಯಲ್ಲಿ ರೀತು ಎಂದೇ ಕರೆಯುತ್ತಾರೆ. ರೇವತಿ ನಿಖಿಲ್ ಮದುವೆಯಾಗಲು ಮುಖ್ಯ ಕಾರಣ ಲೇಔಟ್ ಕೃಷ್ಣಪ್ಪ. ಇವರು ರೇವತಿ ಅವರ ದೊಡ್ಡಪ್ಪ.
ಮೊದಲು ಈ ಪ್ರಪೋಸ್ ಬಗ್ಗೆ ದೇವೇಗೌಡ ಅವರ ಜೊತೆ ಚರ್ಚೆ ಮಾಡಿದ್ದು ಲೇಔಟ್ ಕೃಷ್ಣಪ್ಪನವರು.ರೇವತಿಯವರನ್ನು ದೇವೇಗೌಡ ಕುಟುಂಬದವರು ಒಂದು ಕಾರ್ಯಕ್ರಮದಲ್ಲಿ ನೋಡಿದ್ದರು ನಂತರ ರೇವತಿ ಅವರು ಇಷ್ಟವಾಗಿದ್ದ ಕಾರಣ ಲೇಔಟ್
ಕೃಷ್ಣಪ್ಪರ ಜೊತೆ ಚರ್ಚೆ ಮಾಡಿದ್ದಾರೆ. ರೇವತಿ ಅವರ ತಂದೆ ಹೆಸರು ಮಂಜುನಾಥ್.
ಇವರು ಲೇಔಟ್ ಕೃಷ್ಣಪ್ಪನವರ ತಮ್ಮ .ಇವರಿಬ್ಬರು ಬ್ಯುಸಿನೆಸ್ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಲೇಔಟ್ ಕೃಷ್ಣಪ್ಪ ಅವರ ಕುಟುಂಬದ ಆಸ್ತಿ ಬರೋಬ್ಬರಿ 1500 ಕೋಟಿ ದಾಟುತ್ತದೆ ಹಾಗೂ ಲೇಔಟ್ ಕೃಷ್ಣಪ್ಪ ಅವರ ಮಗ ಪ್ರಿಯಕೃಷ್ಣ ಅವರ ಆಸ್ತಿ ಬರೋಬ್ಬರಿ 900 ಕೋಟಿ ಇದೆ.
ಮಂಜುನಾಥ್ ಅವರು ಲೇಔಟ್ ಕೃಷ್ಣಪ್ಪ ಮತ್ತು ಮಕ್ಕಳ ಬ್ಯುಸಿನೆಸ್ನಲ್ಲಿ ಪಾಲುದಾರರಾಗಿದ್ದಾರೆ. ಇದಲ್ಲದೆ ಅವರೆಲ್ಲರ ಬ್ಯುಸಿನೆಸ್ ನೋಡಿಕೊಳ್ಳುವುದು ಮಂಜುನಾಥ್ ಅವರೇ. ಮಂಜುನಾಥ್ ಅವರ ಆಸ್ತಿ ಬಂದು ಬರೋಬ್ಬರಿ 100 ಕೋಟಿ ಎನ್ನಲಾಗುತ್ತಿದೆ. ಮಂಜುನಾಥ್ ಅವರಿಗೆ ಮೂರು ಮಕ್ಕಳಿದ್ದಾರೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ.
ರೇವತಿ ಅವರು ಸಿಎ ಕಂಪ್ಲೀಟ್ ಮಾಡಿದ್ದು, ಈಗ ಜ್ಯುವೆಲರಿ ಟ್ರೈನಿಂಗ್ ಅನ್ನು ಕಂಪ್ಲೀಟ್ ಮಾಡಿದ್ದಾರೆ. ಈಗ ರೇವತಿ ಅವರು ತಮ್ಮ ಸ್ವಂತ ಬ್ಯುಸಿನೆಸ್ ಓಪನ್ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದ ನಂತರ ಬ್ಯುಸಿನೆಸ್ ಶುರುವಾಗುವ ಸಾಧ್ಯತೆ ಇದೆ.