- Advertisement -
- Advertisement -
ಸುಳ್ಯ: ವಾರದ ಹಿಂದೆಯಷ್ಟೇ ವಿವಾಹವಾಗಿದ್ದ ಯುವಕನೊಬ್ಬ ತನ್ನ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಗುಂಡ್ಯ ನಿವಾಸಿ ದಿ.ಕೊರಗಪ್ಪ ಎಂಬವರ ಪುತ್ರ ರಾಜೇಶ್ ಗುಂಡ್ಯ( 29) ಆತ್ಮಹತ್ಯೆಗೆ ಶರಣಾದವರು.
ರಾಜೇಶ್ ಗುಂಡ್ಯ ಅವರು ಜನನಿ ಫ್ರೆಂಡ್ಸ್ ಕ್ಲಬ್ ನ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ವಾರದ ಹಿಂದೆಯಷ್ಟೇ( ಡಿ.21) ಕಾಣಿಯೂರಿನ ಯುವತಿ ಜೊತೆ ಅವರ ವಿವಾಹವಾಗಿತ್ತು. ಅತಿಥಿ ಸತ್ಕಾರ ಕಾರ್ಯಕ್ರಮವು ಡಿ.24 ರಂದು ಸುಳ್ಯದ ಪುರಭವನದಲ್ಲಿ ಏರ್ಪಡಿಸಿದ್ದರು. ಪತ್ನಿಯೊಂದಿಗೆ ಅವರು ಗುಂಡ್ಯ ಮನೆಯಲ್ಲಿದ್ದರು. ಇನ್ನು ಮನೆಯವರು ಎದ್ದು ಹೋದ ಬಳಿಕ ಅಲ್ಲೇ ಇದ್ದ ಸೀರೆಯನ್ನು ಬಳಸಿ ಈ ಕೃತ್ಯವೆಸಗಿಕೊಂಡಿದ್ದಾರೆ ಎನ್ನಲಾಗಿದೆ.
- Advertisement -