- Advertisement -
- Advertisement -
ಹಾಸನ: ಅನಾಥವಾಗಿ ಬೀದಿಯಲ್ಲಿ ಎಸೆಯಲ್ಪಟ್ಟ ನವಜಾತ ಶಿಶುವೊಂದನ್ನು ಬೀದಿನಾಯಿಗಳು ಕಿತ್ತು ತಿಂದು ಹಾಕಿರುವ ಘಟನೆ ಹಾಸನ ಜಿಲ್ಲೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಯಾರೋ ಪಾಪಿಗಳು ನವಜಾತ ಶಿಶುವೊಂದನ್ನು ಬೀದಿಯ ಬದಿಯಲ್ಲಿ ಎಸೆದು ಹೋಗಿದ್ದು, ಅನಾಥವಾಗಿ ಬಿದ್ದ ಮಗುವನ್ನು ಬೀದಿನಾಯಿಗಳು ಕಿತ್ತು ತಿಂದು ಹಾಕಿದೆ. ಮಗುವಿನ ಮೃತದೇಹವು ಸ್ಥಳೀಯರಿಗೆ ಕಾಣಸಿಕ್ಕಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವಿನ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ ಮತ್ತು ತನಿಖೆ ನಡೆಸುತ್ತಿದ್ದಾರೆ.
- Advertisement -