Friday, April 26, 2024
Homeಕರಾವಳಿಆ ಏಳು ಮಂದಿ ಅದೃಷ್ಟವಂತರು ಯಾರು? ನೂತನ ಸಚಿವರ ಹೆಸರು ಪ್ರಕಟಿಸಿದ ಸಿಎಂ ಬಿಎಸ್ವೈ

ಆ ಏಳು ಮಂದಿ ಅದೃಷ್ಟವಂತರು ಯಾರು? ನೂತನ ಸಚಿವರ ಹೆಸರು ಪ್ರಕಟಿಸಿದ ಸಿಎಂ ಬಿಎಸ್ವೈ

spot_img
- Advertisement -
- Advertisement -

ಬೆಂಗಳೂರು: ಸಚಿವ ಸಂಪುಟಕ್ಕೆ ಹೊಸದಾಗಿ ಯಾರು ಸೇರಿಕೊಳ್ಳುತ್ತಾರೆ ಎಂಬ ಕುತೂಹಲಕ್ಕೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಕೊನೆಗೂ ತೆರೆ ಎಳೆದಿದ್ದಾರೆ. ಹೊಸದಾಗಿ ಏಳು ಮಂದಿ ಸಿಎಂ ಬಿಎಸ್​ವೈ ಸಚಿವ ಸಂಪುಟ ಸೇರಲಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಆರ್ ಶಂಕರ್

ಏಳು ಸಚಿವರ ಹೆಸರಿರುವ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದ್ದು, ಅದರಲ್ಲಿ ಎಂಟಿಬಿ ನಾಗರಾಜ್, ಆರ್.ಶಂಕರ್, ಉಮೇಶ್ ಕತ್ತಿ, ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೇಶ್ವರ್ ಹಾಗೂ ಅರವಿಂದ ಲಿಂಬಾವಳಿಗೆ ಸ್ಥಾನ ನೀಡಲಾಗಿದೆ ಎಂದು ಸಿಎಂ ಬಿಎಸ್​ವೈ ಹೇಳಿದ್ದಾರೆ.

ಅರವಿಂದ್ ಲಿಂಬಾವಳಿ
ಉಮೇಶ್ ಕತ್ತಿ
ಎಂ ಟಿ ಬಿ ನಾಗರಾಜ್
ಸಿ ಪಿ ಯೋಗೇಶ್ವರ್
ಮುರುಗೇಶ್ ನಿರಾಣಿ
ಎಸ್ ಅಂಗಾರ

- Advertisement -
spot_img

Latest News

error: Content is protected !!