Saturday, May 18, 2024
Homeಅಪರಾಧನೆಲ್ಯಾಡಿ: ಎಲ್.ಐ.ಸಿ ಏಜೆಂಟ್ ಕೊಲೆ ಪ್ರಕರಣ- ಆರೋಪಿ ಜಯಚಂದ್ರ ಗೌಡ ಪೊಲೀಸ್ ವಶಕ್ಕೆ

ನೆಲ್ಯಾಡಿ: ಎಲ್.ಐ.ಸಿ ಏಜೆಂಟ್ ಕೊಲೆ ಪ್ರಕರಣ- ಆರೋಪಿ ಜಯಚಂದ್ರ ಗೌಡ ಪೊಲೀಸ್ ವಶಕ್ಕೆ

spot_img
- Advertisement -
- Advertisement -

ನೆಲ್ಯಾಡಿ: ಉದನೆ ಸಮೀಪದ ನೇಲ್ಯಡ್ಕದ ದೇವಸ್ಯದಲ್ಲಿ ನಡೆದ ಎಲ್.ಐ.ಸಿ ಏಜೆಂಟ್ ಶಾಂತಪ್ಪ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ‌ ನಡೆದ 8 ಗಂಟೆಯೊಳಗೆ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ರೆಖ್ಯ ಗ್ರಾಮದ ದೇವಸ್ಯದ ಜಯಚಂದ್ರ ಗೌಡ ಬಂಧಿತ ಪೊಲೀಸ್ ವಶದಲ್ಲಿರುವ ಆರೋಪಿ.

ಕೊಲೆಯಾದ ಶಾಂತಪ್ಪ ಗೌಡ ದೇವಸ್ಯ

ದೇವಸ್ಯದ ಕೃಷಿಕ ಮತ್ತು ಎಲ್.ಐ.ಸಿ ಏಜೆಂಟ್ ಶಾಂತಪ್ಪ ಗೌಡರನ್ನು ವೈಯಕ್ತಿಕ ದ್ವೇಷದ ಕಾರಣಕ್ಕಾಗಿ ಜಯಚಂದ್ರ ಗೌಡ ಇಂದು ಬೆಳಿಗ್ಗೆ ಮಾರಕಾಯುಧಗಳಿಂದ ಹತ್ಯೆ ಮಾಡಿದ್ದರು. ಪ್ರಕರಣದ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಾಂತಪ್ಪ ಗೌಡ ದೇವಸ್ಯನ ಕೊಲೆ ಪ್ರಕರಣದ ಕುರಿತು ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡ, ಆರೋಪಿ ಜಯಚಂದ್ರನನ್ನು ವಶಕ್ಕೆ ಪಡೆದಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ‌.

- Advertisement -
spot_img

Latest News

error: Content is protected !!