Thursday, June 25, 2026
Homeಕರಾವಳಿಧರ್ಮಸ್ಥಳ; ಸೌಜನ್ಯ ನಿವಾಸಕ್ಕೆ ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ

ಧರ್ಮಸ್ಥಳ; ಸೌಜನ್ಯ ನಿವಾಸಕ್ಕೆ ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ

- Advertisement -
- Advertisement -

ಧರ್ಮಸ್ಥಳ; ಪಾಪಿಗಳಿಂದ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಧರ್ಮಸ್ಥಳದ ಸೌಜನ್ಯ ನಿವಾಸಕ್ಕೆ ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ ನೀಡಿದರು.

ಈ ವೇಳೆ ಸೌಜನ್ಯ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ , ಮಾವ ವಿಠ್ಠಲ್ ಗೌಡ ಹಾಗೂ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.ಇದೇ ವೇಳೆ ಸೌಜನ್ಯ ಪೋಷಕರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ಸೌಜನ್ಯ ಸಾವಿಗೆ ಇಷ್ಟು ವರ್ಷವಾದರೂ ನ್ಯಾಯ ಸಿಗದಿರುವುದಕ್ಕೆ ಬೇಸರವಿದೆ. ಆಕೆಗೆ ನ್ಯಾಯ ಸಿಗಲೇಬೇಕೆಂದು ನಾವು ಕೂಡ ಆಗ್ರಹಿಸುತ್ತೇವೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದರು.

- Advertisement -

Latest News

error: Content is protected !!