- Advertisement -
- Advertisement -
ಉಡುಪಿ: ನೀವು ಹಣ ಮಾಡಲು ಕಾರ್ಕಳಕ್ಕೆ ಬಂದಿದ್ದಾ ಎಂದು ಪ್ರಶ್ನಿಸಿದ್ದ ಸಚಿವ ಸುನಿಲ್ ಕುಮಾರ್ಗೆ ಮುತಾಲಿಕ್ ತಿರುಗೇಟು ಕೊಟ್ಟಿದ್ದಾರೆ. ಸುನಿಲ್ ಕುಮಾರ್ ಹತಾಶೆಗೊಳಗಾಗಿರೋದು ಅವರ ಹೇಳಿಕೆಯಿಂದಲೇ ಗೊತ್ತಾಗ್ತಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮುತಾಲಿಕ್ ಹಣ ಮಾಡುವವನಲ್ಲ. ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ. ದುಡ್ಡೇ ಗಳಿಸಬೇಕಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ. ಸುನಿಲ್ ಕುಮಾರ್ ಏನು ಆಗಿದ್ರಿ? ಈಗೇನು ಆಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಇಂತಹ ಆರೋಪಗಳು ನಿಮಗೆ ಶೋಭೆ ತರಲ್ಲ ಎಂದಿದ್ದಾರೆ.
- Advertisement -