Friday, May 17, 2024
Homeಕರಾವಳಿಉಪ್ಪಿನಂಗಡಿ: ಹಿಂದೂ ವ್ಯಕ್ತಿಯ ಮೃತ ಶರೀರವನ್ನು ಮೇಲೆತ್ತಿದ ಮುಸ್ಲಿಂ ಯುವಕರು!

ಉಪ್ಪಿನಂಗಡಿ: ಹಿಂದೂ ವ್ಯಕ್ತಿಯ ಮೃತ ಶರೀರವನ್ನು ಮೇಲೆತ್ತಿದ ಮುಸ್ಲಿಂ ಯುವಕರು!

spot_img
- Advertisement -
- Advertisement -

ಪೆರ್ನೆ: ಉಪ್ಪಿನಂಗಡಿಯ ಪೆರ್ನೆ ಶಾಲೆಯ ಬಳಿ ಬಾವಿಗೆ ಬಿದ್ದ ಹಿಂದೂ ವ್ಯಕ್ತಿಯ ಮೃತ ಶರೀರವನ್ನು ಮುಸ್ಲಿಂ ಯುವಕರು ಮೇಲಕ್ಕೆ ಎತ್ತಿ ಕುಟುಂಬಕ್ಕೆ ಹಸ್ತಾಂತರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೃತರಾದವರನ್ನು 29 ವರ್ಷದ ಶ್ರೀನಿವಾಸ್ ಎಂದು ಹೇಳಲಾಗಿದೆ.ಶ್ರೀನಿವಾಸ್ ರವರ ಮೃತದೇಹನ್ನು ಇಬ್ಬರು ಯುವಕರಾದ ಅಬ್ದುಲ್ ರಹಿಮಾನ್ ಅಡೆಕ್ಕಲ್ ಮತ್ತು ಆಶಿಫ್ ಕೊಯಿಲ ಮೇಲಕ್ಕೆ ಎತ್ತಿ ಮಾನವೀಯತೆ ಮೆರೆದಿದ್ದಾರೆ.

ಶ್ರೀನಿವಾಸ್ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರು ತಾವೇ ಮೃತ ಶರೀರವನ್ನು ಮೇಲಕ್ಕೆ ತಂದು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಯುವಕರ ಈ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

- Advertisement -
spot_img

Latest News

error: Content is protected !!