- Advertisement -
- Advertisement -
ಧರ್ಮಸ್ಥಳದ ಕನ್ಯಾಡಿ ನಿವಾಸಿ ಬಡ ಕಾರ್ಮಿಕ , ಕಾಂಗ್ರೆಸ್ ಕಾರ್ಯಕರ್ತ , ದಲಿತ ಸಮುದಾಯದ ದಿನೇಶ್ ಎಂಬವರನ್ನು ಮನ ಬಂದಂತೆ ಥಳಿಸಿ , ಅವರ ಕಿಡ್ನಿ ಇರುವ ಜಾಗಕ್ಕೆ ಒದ್ದು ಕೊಲೆ ಮಾಡಿದ ಆರೋಪಿ ಶಾಸಕ ಹರೀಶ್ ಪೂಂಜಾರ ಆಪ್ತರಾದ ಜಿಲ್ಲಾ ಭಜರಂಗ ದಳದ ಮುಖಂಡ ಭಾಸ್ಕರ ಧರ್ಮಸ್ಥಳ ಎಂಬವರ ಸಹೋದರ , ಬಿ . ಜೆ . ಪಿ ಮುಖಂಡ ಕಿಟ್ಟ @ ಕೃಷ್ಣನನ್ನು ಶಾಸಕರು ರಕ್ಷಣೆ ಮಾಡುತ್ತಿದ್ದು ಪೋಲಿಸರು ಮುಂದಿನ 24 ಗಂಟೆಗಳ ಒಳಗಾಗಿ ಬಂಧಿಸಬೇಕು . ಇಲ್ಲವಾದರೆ ಪೋಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬೆಳ್ತಂಗಡಿಯ ಮಾಜಿ ಶಾಸಕರು ಕೆ . ವಸಂತ ಬಂಗೇರ ಹೇಳಿದ್ದಾರೆ.
ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಮೃತರ ಮನೆಗೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಬೇಕೆಂದು ನಾನು ಸರಕಾರವನ್ನು ಈ ಮೂಲಕ ಆಗ್ರಹಿಸುತ್ತಿದ್ದೇನೆ ಎಂದಿದ್ದಾರೆ.
- Advertisement -