ನವದೆಹಲಿ: ದುಡ್ಡಿನ ವಿಚಾರದಲ್ಲಿ ಇಂದು ಏನೆಲ್ಲಾ ಅನಾಹುತಗಳು ಆಗುತ್ತವೆ ಅನ್ನೋದನ್ನು ನೀವೇ ನೋಡೇ ಇರ್ತೀರಾ. ಆದ್ರೆ ಜಸ್ಟ್ 10, 20 ರೂಪಾಯಿಗಳಿಗೆ ಕೊಲೆನೇ ನಡೆದು ಹೋಗುತ್ತೆ ಅಂದ್ರೆ ನಂಬೋದಕ್ಕೆ ಸಾಧ್ಯಾನೇ ಆಗೋದಿಲ್ಲ ಅಲ್ವಾ.. ಆದ್ರೆ ಇಂತಹದ್ದೇ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.
ಉತ್ತರ ದೆಹಲಿಯ ಬುರಾರಿ ಎಂಬಲ್ಲಿ ರೂಪೇಶ್ ಎಂಬ ವ್ಯಕ್ತಿ, ಶೇವಿಂಗ್ ಮಾಡಿಸಿಕೊಳ್ಳಲು ಮನೆಯ ಬಳಿ ಇದ್ದ ಕಟಿಂಗ್ ಶಾಪ್ಗೆ ಹೋಗಿದ್ದಾರೆ. ಶೇವ್ ಮಾಡಿಸಿದ್ಮೇಲೆ ಅಂಗಡಿಯ ಮಾಲೀಕ ಸಂತೋಷ್ 50 ರೂಪಾಯಿ ನೀಡುವಂತೆ ಕೇಳಿದ್ದಾನೆ. ಆದ್ರೆ, ರೂಪೇಶ್ ನನ್ನ ಬಳಿ ಅಷ್ಟು ಹಣವಿಲ್ಲ ಈ 30 ರೂಪಾಯಿ ತೆಗೆದುಕೊಳ್ಳಿ ಉಳಿದ 20 ರೂಪಾಯಿ ನಂತ್ರ ಕೊಡುವುದಾಗಿ ಹೇಳಿದ್ದಾರೆ. ಆದ್ರೆ, ಇದಕ್ಕೊಪ್ಪದ ಸಂತೋಷ್ ಕಿರಿಕ್ ಮಾಡಿದ್ದಾನೆ.
ಇದೇ ಕಾರಣಕ್ಕೆ ಇಬ್ಬರ ನಡುವೆ ಜಟಾಪಟಿಯಾಗಿದೆ. ಅಲ್ಲಿಯೇ ಇದ್ದ ಸಂತೋಷ್ ಸಹೋದರ ಸರೋಜ್ ಕೂಡ ಜಗಳದ ನಡುವೆ ಎಂಟ್ರಿಯಾಗಿದ್ದಾನೆ.ಕಿತ್ತಾಟ ವಿಕೋಪಕ್ಕೆ ತಿರುಗಿದ್ದೇ ಸಹೋದರಿಬ್ಬರು ಸೇರಿ ಸಲೂನ್ ಒಳಗಡೆಯೇ ರೂಪೇಶ್ನನ್ನ ಪ್ಲಾಸ್ಟಿಕ್ ಪೈಪ್ನಿಂದ ಮನ ಬಂದಂತೆ ಥಳಿಸಿದ್ದಾರೆ. ಪಾಪ ರೂಪೇಶ್ನ 13 ವರ್ಷದ ಮಗ ತನ್ನ ತಂದೆಯನ್ನ ರಕ್ಷಿಸಲು ಇನ್ನಿಲ್ಲದ ಕಸರತ್ತು ಮಾಡಿದ್ರು, ಪ್ರಯೋಜನ ಆಗ್ಲಿಲ್ಲ. ತೀವ್ರವಾಗಿ ಹಲ್ಲೆಗೊಳಗಾದ ರೂಪೇಶ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳಿದ್ದಿದ್ದಾನೆ.