Monday, June 30, 2025
Homeಕರಾವಳಿಬೆಳ್ತಂಗಡಿ : ಟಿಪ್ಪರ್ ಬಾಡಿಗೆ ವಿಚಾರದಲ್ಲಿ ಕೊಲೆ ಯತ್ನ ಪ್ರಕರಣ: ಮತ್ತೆ ಇಬ್ಬರ ವಿರುದ್ಧ ಧರ್ಮಸ್ಥಳ...

ಬೆಳ್ತಂಗಡಿ : ಟಿಪ್ಪರ್ ಬಾಡಿಗೆ ವಿಚಾರದಲ್ಲಿ ಕೊಲೆ ಯತ್ನ ಪ್ರಕರಣ: ಮತ್ತೆ ಇಬ್ಬರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲು

spot_img
- Advertisement -
- Advertisement -

ಬೆಳ್ತಂಗಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳಲು ಹೋದವನ ಮೇಲೆ ಸೋಡಾ ಬಾಟಲ್ ಬಿಸಾಕಿ ಕೊಲೆಗೆ ಯತ್ನಿಸಿದ ಪ್ರಕರಣ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.27 ರಂದು ಹಲ್ಲೆಗೊಳಗಾದ ಮಹಮ್ಮದ್ ತೌಸಿಫ್ ಸ್ನೇಹಿತ ನೀಡಿದ ದೂರಿನ ಮೇರೆಗೆ ರಹೀಂ ಮತ್ತು ಮಹಮ್ಮದ್ ಫೈಯಾಜ್ ವಿರುದ್ಧ ಜೂ.27 ರಂದು ಪ್ರಕರಣ ದಾಖಲಾಗಿತ್ತು. ಈ ಇದೆ ಪ್ರಕರಣ ಸಂಬಂಧ ಮುನೀರ್ ಮತ್ತು ತೌಸಿಫ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.28 ರಂದು ರಹೀಂ ನೀಡಿದ ದೂರಿನ ಮೇರೆಗೆ BNS 2023 (U/s-115(2),118(1),351(2), r/w 3(5)) ಅಡಿಯಲ್ಲಿ ಪ್ರತಿ ದೂರು ಪ್ರಕರಣ ದಾಖಲಾಗಿದೆ‌.

ಪ್ರಕರಣ: ರಹೀಂ ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಜೂ. 27 ರಂದು ರಹೀಂ ಮತ್ತು ಮಹಮ್ಮದ್ ಫಯಾಜ್ ರವರು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಮನ್ಸೂರ್ ಎಂಬವರ ಅಂಗಡಿ ಬಳಿ ನಿಂತುಕೊಂಡಿದ್ದಾಗ ಸಮಯ ಮಧ್ಯಾಹ್ನ 3 ಗಂಟೆಗೆ ರಿಡ್ಜ್ ಕಾರಿನಲ್ಲಿ ಮುನೀರ್ ಮತ್ತು ತೌಸಿಫ್ ರವರ ಬಂದು ಕಾರಿನಿಂದ ಇಳಿದು ಹಣದ ವ್ಯವಹಾರ ವಿಚಾರವಾಗಿ ಹಣವನ್ನು ಯಾವಾಗ ಕೊಡುತ್ತೀಯಾ ಎಂದು ಹೇಳಿ ತೌಸಿಫ್ ಎಂಬಾತನು ರಹೀಂಗೆ ಕೈಯಿಂದ ಬೆನ್ನಿಗೆ, ಮುಖಕ್ಕೆ ಹೊಡೆದಿರುತ್ತಾನೆ. ಆ ಸಮಯ ಮಹಮ್ಮದ್ ಫಯಾಜ್ ನು ತೌಸಿಫ್ ನನ್ನು ಹಿಡಿದುಕೊಂಡು ಹೊಡೆಯಬೇಡ ಎಂದು ಹೇಳುತ್ತಿರುವ ಸಮಯ ಮುನೀರ್ ಎಂಬಾತನು ರಾಡ್ ನಿಂದ ರಹೀಂ ತಲೆಯ ಹಣೆಗೆ ಹೊಡೆದು ರಕ್ತ ಗಾಯವಾಗಿರುತ್ತದೆ. ನಂತರ ಮುನೀರ್ ನು ಕೈಯಿಂದ ರಹೀಂ ಬೆನ್ನಿಗೆ ಗುದ್ದಿ ನೋವಾಗಿದ್ದು, ನಂತರ ಮಹಮ್ಮದ್ ಫಯಾಜ್ ನಿಗೆ ಮುನೀರ್ ಮತ್ತು ತೌಸಿಫ್ ಕೈಯಿಂದ ಬೆನ್ನಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ಅಲ್ಲಿ ಜನರು ಸೇರಿದ್ದು ಅಲ್ಲಿಂದ ರಹೀಂ ಮತ್ತು ಫಯಾಜ್ ರವರು ಹೋಗುವಾಗ ಮುನೀರ್ ಮತ್ತು ತೌಸಿಫ್ ನು ರಹೀಂ ಉದ್ದೇಶಿಸಿ “ನಿನಗೆ ಒಂದು ಗತಿ ಕಾಣಿಸುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!