- Advertisement -
- Advertisement -
ಮೂಡುಬಿದಿರೆ : ಮೂಡುಬಿದಿರೆ ಸಮೀಪ ತೋಡಾರಿನಲ್ಲಿ ನಿರ್ಮಾಣ ಕೆಲಸ ಆಗುತ್ತಿದ್ದ ಕಟ್ಟಡದ 5ನೇ ಮಹಡಿಯಿಂದ ಬಿದ್ದು, ಕಾರ್ಮಿಕ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ತೋಡಾರು ಪಡೀಲ್ ಬಾಕಿಯಾರು ನಿವಾಸಿ ವಿನಯ್ ಪೂಜಾರಿ (32) ಮೃತಪಟ್ಟ ಯುವಕ.
ಈತ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ವೇಳೆ, 5ನೇ ಮಹಡಿಯಿಂದ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
- Advertisement -