- Advertisement -
- Advertisement -
ರಾಮನಗರ : ಮೊನ್ನೆ ಮೊನ್ನೆ ಸಂಸದ ಡಿ.ಕೆ. ಸುರೇಶ್ ಅವರು ರಾಮನಗರದ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಕೊರೊನಾ ಸೋಂಕಿತರನ್ನು ಮಾತನಾಡಿಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದೀಗ ಡಿ.ಕೆ. ಸುರೇಶ್ ಅವರು ಒಂದು ಹೆಜ್ಜೆ ಹೋಗಿ ಮತ್ತೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
ಕೊರೊನಾ ಸೋಂಕಿತರು ಎಂದರೆ ಸಾಕು ಮಾರು ದೂರ ಓಡುವವರೇ ಹೆಚ್ಚು. ಕೋವಿಡ್ ಸೋಂಕಿಗೆ ಒಳಗಾದರೆ ಅಂತಹವರನ್ನು ಸಮಾಜ ನೋಡುವ ರೀತಿಯೇ ಬೇರೆ. ಇದೆಲ್ಲದರ ಮಧ್ಯೆ ಡಿ.ಕೆ.ಸುರೇಶ್ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಪಿಪಿಇ ಕಿಟ್ ಧರಿಸಿ ಅಂತಿಮ ಕಾರ್ಯದಲ್ಲಿ ಭಾಗಿಯಾದ ಸಂಸದರು ಮೃತ ವ್ಯಕ್ತಿಯ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.ಅಲ್ಲದೇ ಎಲ್ಲಾ ಜನಪ್ರತಿನಿಧಿಗಳಿಗೆ ಡಿ.ಕೆ. ಸುರೇಶ್ ಅವರು ಮಾದರಿಯಾಗಿದ್ದಾರೆ.
- Advertisement -