Monday, May 13, 2024
Homeಅಪರಾಧದೇವಸ್ಥಾನದಲ್ಲಿದ್ದ ಮೂರು ಕಾಣಿಕೆ ಹುಂಡಿಗಳು ಕಳವು- ಬೈಂದೂರು ಠಾಣೆಯಲ್ಲಿ ದೂರು ದಾಖಲು

ದೇವಸ್ಥಾನದಲ್ಲಿದ್ದ ಮೂರು ಕಾಣಿಕೆ ಹುಂಡಿಗಳು ಕಳವು- ಬೈಂದೂರು ಠಾಣೆಯಲ್ಲಿ ದೂರು ದಾಖಲು

spot_img
- Advertisement -
- Advertisement -

ಬೈಂದೂರು: ದೇವಸ್ಥಾನದ ಮೂರು ಹುಂಡಿಗಳನ್ನು ಕಳವು ಮಾಡಿ ಪರಾರಿಯಾದ ಘಟನೆ ಕೆರ್ಗಾಲು ಗ್ರಾಮದ ಶ್ರೀ ವನದುರ್ಗ ದೇವಿ ದೇವಸ್ಥಾನದಲ್ಲಿ ನಡೆದಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುನಾಥ ಪೂಜಾರಿ ಇವರು ಕೆರ್ಗಾಲು ಗ್ರಾಮದ ಶ್ರೀ ವನದುರ್ಗ ದೇವಿ ದೇವಸ್ಥಾನದ ಮೇಲ್ವಿಚಾರಕರಾಗಿದ್ದು ನ.30 ರಂದು ದೇವಸ್ಥಾನದ ಪೂಜಾ ಕಾರ್ಯಗಳು ಎಂದಿನಂತೆ ಮುಗಿದ ಬಳಿಕ ರಾತ್ರಿ 9:30 ಗಂಟೆಗೆ ದೇವಸ್ಥಾನದ ಬಾಗಿಲು ಹಾಕಿ ಹೋಗಿದ್ದರು.

ಮರುದಿನ ಅಂದರೆ ಡಿ. 01 ರಂದು ಬೆಳಿಗೆ 05:30 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲು ಹೋದಾಗ ಯಾರೋ ಕಳ್ಳರು ದೇವಸ್ಥಾನದ ಮುಖ್ಯ ದ್ವಾರದ ಬಾಗಿಲಿಗೆ ಹಾಕಿದ ಬೀಗವನ್ನು ತುಂಡು ಮಾಡಿದ್ದು ಕಂಡುಬಂದಿದ್ದತ್ತು.

ದೇವಸ್ಥಾನದ ಒಳಗೆ ಪ್ರವೇಶಿಸಿ ನೋಡಿದಾಗ ಒಳಗೆ ಇದ್ದ 3 ಸ್ಟೀಲ್ ನ ಕಾಣಿಕೆ ಹುಂಡಿಗಳನ್ನು ಒಡೆದು ಸುಮಾರು 20,000 ರೂಪಾಯಿ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ.

- Advertisement -
spot_img

Latest News

error: Content is protected !!