ಪುತ್ತೂರು: ಮೊಬೈಲ್ ಕಳ್ಳನೊಬ್ಬನನ್ನು ಬಂಧಿಸಿ ಆತನಿಂದ 5 ಮೊಬೈಲ್ ಗಳನ್ನು ಪೊಲೀಸರು ವಶ ಪಡಿಸಿಕೊಂಡಿರುವ ಘಟನೆ ಪುತ್ತೂರಿನ ಸಂಟ್ಯಾರಿನಲ್ಲಿ ನಡೆದಿದೆ.
ಸಂಟ್ಯಾರಿನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಅಸಲಿಯತ್ತು ಬಯಲಾಗಿದೆ.ಕಾಸರಗೋಡು ತಾಲೂಕಿನ ಎಣ್ಮಕಜೆ ಗ್ರಾಮದ ನಿವಾಸಿ ಉಮೈರ್ (24) ಬಂಧಿತ ಆರೋಪಿ.
ಪೊಲೀಸರು ಆರಂಭದಲ್ಲಿ ವಿಚಾರಿಸಿದಾಗ ತಾನು ವಿಟ್ಲದ ಮಹಮ್ಮದ್, ಉಪ್ಪಿನಂಗಡಿಯ ಆಸೀಫ್ ಎಂದು ಸುಳ್ಳು ಹೇಳಿದ್ದ.ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾನೆ. ಬಂಧಿತನಿಂದ 5 ಮೊಬೈಲ್ ಫೋನ್ ಗಳು ಹಾಗೂ ಡಿಯೋ ಗಾಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಆರೋಪಿ ಬೆಳ್ಳಾರೆಯ ನೆಟ್ಟಾರಿನಲ್ಲಿ ಮಹಮ್ಮದ್ ಎಂಬವರ ಮನೆಯಿಂದ 8 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದ.ಅಲ್ಲದೇ ಕೊಳಂಬಳದ ಅಬ್ಬಾಸ್, ತಾರಿಪಡ್ಪು ಅದ್ರು ಎಂಬವರ ಮನೆಯಿಂದಲೂ ಮೊಬೈಲ್ ಕಳ್ಳತನ ಮಾಡಿದ್ದ ಎಂಬುವುದು ವಿಚಾರಣೆ ವೇಳೆ ಗೊತ್ತಾಗಿದೆ. ಈತನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.