Sunday, June 29, 2025
Homeಕರಾವಳಿಮಂಗಳೂರು : ಫಸ್ಟ್ ನ್ಯೂರೋ ಆಸ್ಪತ್ರೆಯ ವತಿಯಿಂದ 'ಸಂಚಾರಿ ವಾಹನ' ಅಭಿಯಾನಕ್ಕೆ ಚಾಲನೆ!

ಮಂಗಳೂರು : ಫಸ್ಟ್ ನ್ಯೂರೋ ಆಸ್ಪತ್ರೆಯ ವತಿಯಿಂದ ‘ಸಂಚಾರಿ ವಾಹನ’ ಅಭಿಯಾನಕ್ಕೆ ಚಾಲನೆ!

spot_img
- Advertisement -
- Advertisement -

ಮಂಗಳೂರು: ನಗರದ ಫಸ್ಟ್ ನ್ಯೂರೋ ಬ್ರೈನ್ ಆಂಡ್ ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಸಾರ್ವಜನಿಕರಲ್ಲಿ ಪಾರ್ಶ್ವವಾಯು ಬಗ್ಗೆ ಜಾಗೃತಿ ಮೂಡಿಸುವ ಸಂಚಾರಿ ವಾಹನ ಅಭಿಯಾನಕ್ಕೆ ಶಾಸಕ ವೇದವ್ಯಾಸ ಕಾಮತ್ ಸೋಮವಾರ ಚಾಲನೆ ನೀಡಿದರು.

ಹಲವರಿಗೆ ಪಾರ್ಶ್ವವಾಯು ರೋಗದ ಬಗ್ಗೆ ಮಾಹಿತಿ ಇರುವುದಿಲ್ಲ. ಸರಿಯಾದ ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ದೇಹದ ಅಂಗಾಂಗಳು ಜೀವನ ಪೂರ್ತಿ ಊನವಾಗುವ ಸಂಭವ ಹೆಚ್ಚು ಇರುತ್ತವೆ. ಹಾಗಾಗಿ ಜನರಿಗೆ ಪಾರ್ಶ್ವವಾಯು ರೋಗದ ಬಗ್ಗೆ ಮುನ್ನೆಚ್ಚರಿಕೆ ಮಾಹಿತಿ ನೀಡುವ ಜೊತೆಗೆ ತಕ್ಷಣ ಲಭ್ಯವಿರುವ ಚಿಕಿತ್ಸೆಗಳ ವಿವರಣೆ ಮತ್ತು ‘ಗೋಲ್ಡನ್ ಅವರ್’ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಈ ಅಭಿಯಾನದ ಉದ್ದೇಶ .ಕರ್ನಾಟಕ ರಾಜ್ಯದ 6 ಜಿಲ್ಲೆಗಳು ಮತ್ತು ನೆರೆಯ ಕೇರಳದ 2 ಜಿಲ್ಲೆಗಳಲ್ಲಿ ವಾಹನ ಸಂಚರಿಸಿ ಹಳ್ಳಿಗರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಲಿದೆ’ ಎಂದು ವೇದವ್ಯಾಸ ಕಾಮತ್ ಹೇಳಿದರು.

ಅಡ್ಯಾರ್ – ಕಣ್ಣೂರು ಪರಿಸರದಲ್ಲಿ ಸ್ಥಾಪಿತವಾದ ಈ ಆಸ್ಪತ್ರೆಯು ರಾಜ್ಯವ್ಯಾಪಿ ಹೆಸರುವಾಸಿಯಾಗಿದೆ’ ಎಂದು ಮಹಾನಗರ ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.ಪಾಲಿಕೆ ಸದಸ್ಯೆ ಚಂದ್ರಾವತಿ ಕಣ್ಣೂರು, ಡಾ. ರಕ್ಷಿತ್ ಕೆದಾಂಬಾಡಿ, ರಂಜಿತ್ ಶೆಟ್ಟಿ, ಸಿ.ಒ.ಒ. ರೋಶನಿ ಶೆಟ್ಟಿ, ನಿರ್ದೇಶಕ ರಾಮಚಂದ್ರ ಶೆಟ್ಟಿ, ಸಿಬ್ಬಂದಿ ಇದ್ದರು. ಸಂಪತ್ ಕಾರ್ಯಕ್ರಮ ನಿರೂಪಿಸಿದರು.

‘ಸಂಚಾರಿ ವಾಹನವು ದಕ್ಷಿಣ ಕನ್ನಡ, ಉಡುಪಿ, , ಚಿಕ್ಕಮಗಳೂರು,ಕಾರವಾರ ,ಕೊಡಗು,ಹಾಸನ ಕೇರಳ ರಾಜ್ಯದ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಸಂಚರಿಸಲಿದೆ. ಒಂದು ತಿಂಗಳ ಅಭಿಯಾನದಲ್ಲಿ 1.20 ಕೋಟಿ ಜನರನ್ನು ತಲುಪಲು ಯೋಜಿಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜೇಶ್ ಶೆಟ್ಟಿ ಹೇಳಿದರು.

- Advertisement -
spot_img

Latest News

error: Content is protected !!