Sunday, June 29, 2025
Homeತಾಜಾ ಸುದ್ದಿಚರ್ಚೆಗೆ ಗ್ರಾಸವಾಗುತ್ತಿದೆ ಶಾಸಕರ ಬ್ಯಾಕ್ ಟು ಬ್ಯಾಕ್ ಟೂರ್: ರಘುಪತಿ ಭಟ್‌ ತಂಡದ ನಂತರ ಇದೀಗ...

ಚರ್ಚೆಗೆ ಗ್ರಾಸವಾಗುತ್ತಿದೆ ಶಾಸಕರ ಬ್ಯಾಕ್ ಟು ಬ್ಯಾಕ್ ಟೂರ್: ರಘುಪತಿ ಭಟ್‌ ತಂಡದ ನಂತರ ಇದೀಗ ಸೋಮಶೇಖರ್ ರೆಡ್ಡಿ ತಂಡದ ಸರದಿ..!

spot_img
- Advertisement -
- Advertisement -

ಬೆಂಗಳೂರು: ವಿಧಾನಸಭೆ ಹಾಗೂ ವಿಧಾನಪರಿಷತ್ ಶಾಸಕರ ಬ್ಯಾಕ್ ಟು ಬ್ಯಾಕ್ ಅಂತಾರಾಜ್ಯ ಪ್ರವಾಸಗಳು ಇದೀಗ ಚರ್ಚೆಗೆ ಗ್ರಾಸವಾಗುತ್ತಿದೆ. ಭರವಸೆಗಳ ಸಮಿತಿ ಪ್ರವಾಸದ ಬೆನ್ನಲ್ಲೇ ಇದೀಗ ಶಾಸಕರ ಮತ್ತೊಂದು ತಂಡ ಅಂತಾರಾಜ್ಯ ಪ್ರವಾಸಕ್ಕೆ ತೆರಳಿದೆ.

ಕೆಲ ದಿನಗಳ ಹಿಂದೆಯಷ್ಟೇ ಭರವಸೆ ಸಮಿತಿಯ ಅಧ್ಯಕ್ಷ ರಘುಪತಿ ಭಟ್ ನೇತೃತ್ವದ 15 ಮಂದಿ ಶಾಸಕರ ತಂಡ ಲೇಹ್ ಲಡಾಕ್ ಗೆ ತೆರಳಿತ್ತು. ಆದರೆ‌ ಕೇಂದ್ರಾಡಳಿತ ಪ್ರದೇಶ ಲೇಹ್ ಲಡಾಕ್ ಗೆ ಭರವಸೆ ಸಮಿತಿ ಶಾಸಕರ ಪ್ರವಾಸ ಚರ್ಚೆಗೆ ಗ್ರಾಸವಾಗಿತ್ತು. ಅಧ್ಯಯನದ ಹೆಸರಿನಲ್ಲಿ ಮೋಜಿನ ಪ್ರವಾಸವೇ ಎಂಬ ಪ್ರಶ್ನೆಯೂ ಉದ್ಭವವಾಗಿತ್ತು. ಇದೀಗ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ಸಂಸ್ಥೆಗಳ ಅಧ್ಯಕ್ಷ,ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ನೇತೃತ್ವದ ತಂಡ ‌ನಾಲ್ಕು ದಿನಗಳ ಪ್ರವಾಸಕ್ಕೆ ಗುಜರಾತ್ ಹಾಗೂ‌ ದೆಹಲಿಗೆ ತೆರಳಿದೆ.
ಅಧ್ಯಯನದ ನೆಪದಲ್ಲಿ ಶಾಸಕರು‌ ಹಾಗೂ ಅವರ ಕುಟುಂಬಸ್ಥರ ಹಾಗೂ ನೌಕರರ ಅಂತಾರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರಿನ ಶಾಸಕರ ಭವನದಿಂದ ಮಂಗಳವಾರ ಶಾಸಕರ ತಂಡ ಪ್ರವಾಸಕ್ಕೆ ತೆರಳಿದೆ. ಈ ತಂಡದಲ್ಲಿ 12 ಶಾಸಕರು ಹಾಗೂ ವಿಧಾನಸಭೆ ಸಚಿವಾಲಯದ 3 ಸಿಬ್ಬಂದಿ ಒಳಗೊಂಡಿದ್ದಾರೆ.
ಪಂಚಾಯತ್ ಸಂಸ್ಥೆಗಳ ಅಧ್ಯಕ್ಷರಾಗಿರುವ ಶಾಸಕ ಜಿ. ಸೋಮಶೇಖರ್ ರೆಡ್ಡಿ, ಶಾಸಕರಾದ ಸಿ.ಎಸ್. ಪುಟ್ಟರಾಜು, ಡಾ. ಅಂಜಲಿ ನಿಂಬಾಳ್ಕರ್,ಶರಣು ಸಲಗಾರ್, ಅರುಣ್ ಕುಮಾರ್ ಗುತ್ತೂರ್, ಕೆ.ವೈ. ನಂಜೇಗೌಡ, ಆರ್ ಶಂಕರ್, ಸಿ ಎಂ ಲಿಂಗಪ್ಪ, ಎನ್, ರವಿಕುಮಾರ್, ಎಂ.ಎಲ್. ಅನಿಲ್ ಕುಮಾರ್ ಹಾಗೂ ಟಿ. ನರಸಿಂಹಸ್ವಾಮಿ ತಂಡ 4 ದಿನಗಳ ಪ್ರವಾಸಕ್ಕೆ ತೆರಳಿದೆ.

ಜೊತೆಗೆ ಮೂವರು ಸಿಬ್ಬಂದಿ ಕೂಡ ಪ್ರವಾಸಕ್ಕೆ ತೆರಳಿದ್ದಾರೆ. ನೌಕರರಾದ ಸಂತೋಷ್ ಪಿ. ತಿಕೋಟಿಕರ್ ಹಾಗೂ ನಟರಾಜ್ ಕೂಡಾ ತೆರಳಿದ್ದಾರೆ. ಶಾಸಕರ ತಂಡದೊಂದಿಗೆ ಅವರ ಕುಟುಂಬಸ್ಥರು ಕೂಡ‌‌ ತೆರಳಿದ್ದಾರೆ. ಶಾಸಕರಾದ ಶರಣು ಸಲಗಾರ್ ಪತ್ನಿ ಸಾವಿತ್ರಿ, ಪುತ್ರರಾದ ಕ್ರಿಷ್ಹಾಗೂ ಆಶಿಶ್. ಜಿ., ಸೋಮಶೇಖರ್ ರೆಡ್ಡಿ ಅವರ ವಿಶೇಷ ಅಧಿಕಾರಿ ಟಿ. ಶ್ರೀನಿವಾಸ ಮೋಟಕಾರ್. ಶಾಸಕ ಅರುಣ್ ಕುಮಾರ್ ಗುತ್ತೂರ್ ಪತ್ನಿ ಮಂಗಳಗೌರಿ, ಪುತ್ರಿ ಹರ್ಷಿತಾ, ಪರಿಷತ್ ಸದಸ್ಯ ಆರ್. ಶಂಕರ್ ಅವರ ಪತ್ನಿ ಧನಲಕ್ಷ್ಮೀ ಇದ್ದಾರೆ.
ಇನ್ನು ಬಹುಮುಖ್ಯ ಅಂಶವೆಂದರೆ ಗುಜರಾತ್ ಹಾಗೂ ದೆಹಲಿಯಲ್ಲಿಆರ್ ಡಿಪಿ‌ಆರ್ ಸಮಿತಿಗಳು ಇಲ್ಲ. ಈ ಕಮಿಟಿಗಳಿಲ್ಲದ ದೆಹಲಿಯಲ್ಲಿ ಏನು ಅಧ್ಯಯನ ಮಾಡಲಿದೆ ನಮ್ಮ ಶಾಸಕರ, ವಿಧಾನ ಪರಿಷತ್ ಸದಸ್ಯರ ನಿಯೋಗ? ಎಂಬ ಪ್ರಶ್ನೆ ಉದ್ಭವಿಸಿದೆ.

- Advertisement -
spot_img

Latest News

error: Content is protected !!