- Advertisement -
- Advertisement -
ಮಧುಗಿರಿ: ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಅವರು ತಮ್ಮ ಮಗನ ವಯಸ್ಸಿನಲ್ಲಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಕಾಲಿಗೆ ಬಿದ್ದು ಅಶೀರ್ವಾದ ಪಡೆದುಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದಿದೆ.
ಮಾಜಿ ಐಎಎಸ್ ಅಧಿಕಾರಿ, ಮಧುಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ವೀರಭದ್ರಯ್ಯ ಪಕ್ಷದ ವರಿಷ್ಠರ ಕುಟುಂಬದ ಕುಡಿ ಎಂಬ ಕಾರಣಕ್ಕೆ ಪ್ರಜ್ವಲ್ ರೇವಣ್ಣನ ಕಾಲಿಗೆ ಬಿದ್ದಿದ್ದಾರೆ. ನಿನ್ನೆ ದಿವಂಗತ ಸತ್ಯನಾರಾಯಣ ಪುಣ್ಯತಿಥಿ ಇತ್ತು. ಹೀಗಾಗಿ ಅನೇಕರು ಆಗಮಿಸಿದ್ದರು. ಅಲ್ಲದೆ ಪ್ರಜ್ವಲ್ ರೇವಣ್ಣ ಸಹ ಉಪಸ್ಥಿತರಿದ್ದರು. ಈ ವೇಳೆ ನೂರಾರು ಜನರ ಎದುರಿಗೆ ಪ್ರಜ್ವಲ್ ರೇವಣ್ಣರ ಕಾಲಿಗೆ ಬಿದ್ದಿದ್ದಾರೆ. ಈ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
- Advertisement -