- Advertisement -
- Advertisement -
ಸುಳ್ಯ: ಅರಂತೋಡಿನಲ್ಲಿ ಕೆಲವು ದಿನಗಳ ಹಿಂದೆ ಸುಳ್ಯ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದು, ಬಂಧನಕ್ಕೊಳಗಾಗಿದ್ದ ಅರಂತೋಡು ಗ್ರಾಮ ಆಡಳಿತಾಧಿಕಾರಿಗೆ ಜಾಮೀನು ಮಂಜೂರಾಗಿದೆ.
ಹಕ್ಕು ಖುಲಾಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಂತೋಡು ಗ್ರಾಮದ ಅಡ್ತಲೆ ಹರಿಪ್ರಸಾದ್ ಅವರಿಂದ ಅರಂತೋಡು ಗ್ರಾಮ ಆಡಳಿತಾಧಿಕಾರಿ ಮಿಯಾ ಸಾಬ್ ಮುಲ್ಲಾ ಹಣದ ಬೇಡಿಕೆ ಇರಿಸಿ, ಅದನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು.ಇದೀಗ ಆರೋಪಿಗೆ ಜಾಮೀನು ದೊರೆತಿದೆ.
- Advertisement -