Saturday, May 4, 2024
Homeಕರಾವಳಿಕಡಬ; ಪತ್ನಿಯೊಂದಿಗೆ ಜಗಳ ಮಾಡಿ ಹೋದ ವ್ಯಕ್ತಿಯ ಶವ ಕಾಡಿನಲ್ಲಿ ಪತ್ತೆ

ಕಡಬ; ಪತ್ನಿಯೊಂದಿಗೆ ಜಗಳ ಮಾಡಿ ಹೋದ ವ್ಯಕ್ತಿಯ ಶವ ಕಾಡಿನಲ್ಲಿ ಪತ್ತೆ

spot_img
- Advertisement -
- Advertisement -

ಕಡಬ; ಪತ್ನಿಯೊಂದಿಗೆ ಜಗಳ ಮಾಡಿ ಮನೆ ಬಿಟ್ಟು ಹೋದ ವ್ಯಕ್ತಿಯ ಮೃತದೇಹ ಕೊಜಂಬಾಡಿ  ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ದೋಳ್ಪಾಡಿಯಲ್ಲಿ ನಡೆದಿದೆ.

ನಾಗಪ್ಪ ಗೌಡ ಅವರ ಮಗ ಲಾರಿ ಚಾಲಕ  ದೇವರಾಜ ಮೃತಪಟ್ಟ ವ್ಯಕ್ತಿ. ಕುಡಿತದ ಚಟ ಹೊಂದಿದ್ದ ಇವರು ಪತ್ನಿ ಜೊತೆ ಅಗಾಗ ಜಗಳ ಮಾಡುತ್ತಿದ್ದರು. ಮನೆಯವರು ಹಲವು ಬಾರಿ ಬುದ್ಧಿವಾದ ಹೇಳಿದ್ದರು. ಆದರೆ  ನ. 28 ರಂದು  ಮತ್ತೆ ಜಗಳ ಮಾಡಿದ್ದು  ನಾಗಪ್ಪ ಅವರ ಮೊಮ್ಮಗ ಅಜ್ಜ  ನಾಗಪ್ಪ ಗೌಡರಿಗೆ ವಿಚಾರ ತಿಳಿಸಿದ್ದರ. ಹೀಗಾಗಿ ಮನೆಗೆ ತೆರಳಿ ಮತ್ತೆ ತಿಳುವಳಿಕೆ ಹೇಳಿ ಬಂದಿದ್ದರು.

 ನ.29 ರಂದು ಮುಂಜಾನೆ ಹೋದ ಪತಿ ಮರಳಿ ಬಾರದ ಹಿನ್ನೆಲೆ  ಪತ್ನಿ ತನ್ನ ಮಾವನಿಗೆ ವಿಚಾರ ತಿಳಿಸಿ ಮನೆ ಮಂದಿಯೊಂದಿಗೆ ವಿವಿಧ ಕಡೆ ಹುಟುಕಾಟ ಮಾಡಿದರೂ ಪತ್ತೆಯಾಗಲಿಲ್ಲ. ಡಿಸೆಂಬರ್ 2 ರಂದು ಮಧ್ಯಾಹ್ನದ ವೇಳೆ ನಾಪತ್ತೆಯಾಗಿದ್ದ  ದೇವರಾಜ ಮೃತ ದೇಹವು ಕಡಬ ತಾಲೂಕು ದೊಲ್ಪಾಡಿ ಗ್ರಾಮದ ಕೊಜಂಬಾಡಿ  ಅರಣ್ಯ ಪ್ರದೇಶದಲ್ಲಿ  ಕವಚಿ ಬಿದ್ದ ರೀತಿಯಲ್ಲಿ ಪತ್ತೆಯಾಗಿದೆ.

ಮೃತರ ತಂದೆ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!