- Advertisement -
- Advertisement -
ಉಪ್ಪಿನಂಗಡಿ: ಕಳೆದ ಭಾನುವಾರ ಮಧ್ಯ ರಾತ್ರಿ ಬಾರ್ಯ ಗ್ರಾಮದಿಂದ ಯುವತಿ ನಾಪತ್ತೆಯಾದ ಪ್ರಕರಣ ಸುಖಾಂತ್ಯವಾಗಿದೆ. ಉಪ್ಪಿನಂಗಡಿ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ಆಕೆಯ ಹೆತ್ತವರ ವಶಕ್ಕೆ ಒಪ್ಪಿಸಿದ್ದಾರೆ.
ಮಂಗಳೂರು ತಾಲೂಕು ಮುಡಿಪು ಎಂಬಲ್ಲಿನ ಶಕೀನಾ ಎಂಬವರ ಮನೆಯಲ್ಲಿ ಇದ್ದ ಈಕೆಯನ್ನು ಉಪ್ಪಿನಂಗಡಿಯ ಮಹಿಳಾ ಎಎಸೈ ಕವಿತಾರವರು ಪತ್ತೆ ಹಚ್ಚಿ ಆಕೆಯ ತಂದೆಯ ಜೊತೆ ಕಳುಹಿಸಿಕೊಟ್ಟಿದ್ದಾರೆ.
ಆಕೆಯನ್ನು ಕರೆದುಕೊಂಡು ಹೋಗಿದ್ದನೆಂದು ಸಂಶಯಿಸಲಾದ ಮುದಾಸೀರ್ ಎಂಬಾತನಿಗೆ ಪೊಲೀಸ್ ಠಾಣೆಯ ಬಳಿ ಯುವತಿಯ ಕಡೆಯವರೆನ್ನಲಾದ ಗುಂಪೊಂದು ಹಲ್ಲೆಗೆ ಮುಂದಾಗಿ ಉದ್ವಿಗ್ನ ವಾತಾವರಣ ಉಂಟಾಗಿತ್ತು.ಆದರೆ ಪೊಲೀಸರ ಪರಿಸ್ಥಿತಿ ತಿಳಿಗೊಳಿಸಿದರು.
- Advertisement -