Wednesday, May 15, 2024
Homeಕರಾವಳಿಉಡುಪಿಕುಚ್ಚಲಕ್ಕಿ ಕೊಡುತ್ತೇವೆ ಎಂದದ್ದು ಕೇವಲ ಪ್ರಚಾರಕ್ಕಾಗಿ ಅಲ್ಲ. ಕೊಡುವ ಪ್ರಯತ್ನ ಮುಂದುವರೆಸುತ್ತೇವೆ; ಸಚಿವ ಕೋಟ ಶ್ರೀನಿವಾಸ್...

ಕುಚ್ಚಲಕ್ಕಿ ಕೊಡುತ್ತೇವೆ ಎಂದದ್ದು ಕೇವಲ ಪ್ರಚಾರಕ್ಕಾಗಿ ಅಲ್ಲ. ಕೊಡುವ ಪ್ರಯತ್ನ ಮುಂದುವರೆಸುತ್ತೇವೆ; ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ

spot_img
- Advertisement -
- Advertisement -

ಉಡುಪಿ: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಡಿತರದಲ್ಲಿ ಕುಚ್ಚಲಕ್ಕಿ ವಿತರಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಈವರೆಗೂ ಕುಚಲಕ್ಕಿ ವಿತರಣೆಯಾಗಿಲ್ಲ. ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿದ್ದಾರೆ

ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಕುಚಲಕ್ಕಿ ವಿತರಣೆಗೆ ಒಂದು ಲಕ್ಷ ಕ್ವಿಂಟಾಲ್ ಭತ್ತದ ಅವಶ್ಯಕತೆ ಇದ್ದು, ಭತ್ತದ ಖರೀದಿ ಕೇಂದ್ರಕ್ಕೆ ರೈತರಿಂದ ಭತ್ತ ಕಡಿಮೆ ಹರಿದು ಬಂತು. ನಮ್ಮ ಊಹೆಯ ಪ್ರಮಾಣದಲ್ಲಿ ಭತ್ತ ಸಂಗ್ರಹ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷ ಕುಚ್ಚಲಕ್ಕಿ ಕೊಡಲು ಸಾಧ್ಯವಾಗಿಲ್ಲ.ಕುಚ್ಚಲಕ್ಕಿ ಕೊಡುತ್ತೇವೆ ಎಂಬುದು ಹೇಳಿರುವುದು ಕೇವಲ ಪ್ರಚಾರಕ್ಕಾಗಿ ಅಲ್ಲ. ಕೊಡುವ ಪ್ರಯತ್ನ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!