- Advertisement -
- Advertisement -
ಉಪ್ಪುಂದ: ಸಿಮೆಂಟ್ ತುಂಬಿದ್ದ ಮಿನಿ ಲಾರಿ ಪಲ್ಟಿಯಾಗಿ, ಮೂವರು ಗಾಯಗೊಂಡು, ದನವೊಂದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾ.ಹೆದ್ದಾರಿ ೬೬ ರ ಶಾಲೆಬಾಗಿಲು ಬಳಿ ನಡೆದಿದೆ.
ಬೈಂದೂರಿನಿಂದ ಕುಂದಾಪುರ ಕಡೆ ಲಾರಿ ಸಂಚರಿಸುತ್ತಿದ್ದು, ಈ ವೇಳೆ ದನ ಅಡ್ಡ ಬಂದಿದೆ. ಇದನ್ನ ತಪ್ಪಿಸಲು ಬ್ರೇಕ್ ಹಾಕಿದಾಗ ಲಾರಿ ಪಲ್ಟಿಯಾಗಿದೆ. ಲಾರಿಯ ಒಳಗಿದ್ದ ಮೂವರು ಗಾಯಗೊಂಡಿದ್ದಾರೆ. ದನ ಸ್ಥಳದಲ್ಲೇ ಸಾವನ್ನಪ್ಪಿದೆ.
- Advertisement -