- Advertisement -
- Advertisement -
ಉಡುಪಿ: ಕುಕ್ಕಿಕಟ್ಟೆಯ ಖ್ಯಾತ ಹಿರಿಯ ವಾದ್ಯ ಸಂಗೀತಗಾರ ಶತಾಯುಷಿ ಮಾರ್ಪಳ್ಳಿ ಕಾಳು ಶೇರಿಗಾರ್ (104 ವರ್ಷ ) ಕೊರೋನಾ ಸೋಂಕಿನಿಂದ ಇಂದು ( ಮೇ.10) ಕೊನೆಯುಸಿರೆಳೆದಿದ್ದಾರೆ.
ಕೊಡುಗೈ ದಾನಿಯೂ, ಸ್ವಾಭಿಮಾನಿಯೂ ಆದ ಕಾಳು ಶೇರಿಗಾರ್ ಅವರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಿಸದೆ ಇಂದು ನಿಧನ ಹೊಂದಿದ್ದಾರೆ. ದಿವಂಗತರು 2 ಗಂಡು, 3 ಹೆಣ್ಣುಮಕ್ಕಳು ಹಾಗೂ ಅಪಾರ ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
- Advertisement -