- Advertisement -
- Advertisement -
ಧರ್ಮಸ್ಥಳ : ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು
ಒಳನಾಡು ಸಚಿವರಾದ ಮಂಕಾಳ್ ವೈದ್ಯ ಮತ್ತು ಪತ್ನಿ ಪುಷ್ಪಲತಾ ಜುಲೈ 3 ರಂದು (ಇಂದು) ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಫೂಜೆ ಸಲ್ಲಿಸಿದರು. ನಂತರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಧರ್ಮಸ್ಥಳ ಭೇಟಿ ವೇಳೆ ಮಂಕಾಳ್ ವೈದ್ಯ ಜೊತೆ ಪತ್ನಿ ಪುಷ್ಪಲತಾ , ಕಾಂಗ್ರೆಸ್ ಮುಖಂಡ ವಿನಾಯಕ್ ವೈದ್ಯ ಭಟ್ಕಳ , ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ್,ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಜೊತೆಯಲ್ಲಿದ್ದರು. ಸಚಿವರ ಮಂಕಾಳ್ ವೈದ್ಯರಿಗೆ ಧರ್ಮಸ್ಥಳದ ಮ್ಯಾನೇಜರ್ ಪಾರ್ಶ್ವನಾಥ್ ದೇವರ ದರ್ಶನಕ್ಕೆ ಹಾಗೂ ಧರ್ಮಾಧಿಕಾರಿಗಳ ಭೇಟಿಗೆ ಸಹಕರಿಸಿದರು
- Advertisement -