- Advertisement -
- Advertisement -
ಮಂಗಳೂರು: ಮಂಗಳೂರಿನ ನವಭಾರತ್ ಸರ್ಕಲ್ ನಲ್ಲಿ ನಾಡು ಕಂಡ ಶ್ರೇಷ್ಠ ಸಾಹಿತಿ ರಾಷ್ಟ್ಪಕವಿ ಮಂಜೇಶ್ವರ ಗೋವಿಂದ ಪೈ ಅವರ ಪುತ್ಥಳಿಯನ್ನು ಇಂದು ಉದ್ಘಾಟಿಸಲಾಯಿತು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮತ್ತು ಇತರರು ಈ ವೇಳೆ ಉಪಸ್ಥಿತರಿದ್ದರು.
ಫುಜ್ಲಾನಾ ಗ್ರೂಪ್ ವತಿಯಿಂದ ವನಿತಾ ಅಚ್ಯುತ್ ಪೈ ಅವರ ಸ್ಮರಣಾರ್ಥ ಈ ಸರ್ಕಲ್ ಅಭಿವೃದ್ಧಿಗೆ ಕೊಡುಗೆ ನೀಡಲಾಗಿದ್ದು, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮೂಲಕ ವೃತ್ತದ ಪುನರ್ ನಿರ್ಮಾಣ ಹಾಗೂ ನಿರ್ವಹಣೆ ನಡೆಯಲಿದೆ.
ನವಭಾರತ್ ವೃತ್ತದಲ್ಲಿದ್ದ ಹಳೆಯ ಬಾವಿಯನ್ನು ಸಂರಕ್ಷಿಸಲಾಗಿದ್ದು, ಪುತ್ಥಳಿಯ ಕಾರಂಜಿಗೆ ಚಿಮ್ಮುವ ನೀರಿಗೆ ಈ ಬಾವಿಯ ನೀರನ್ನು ಉಪಯೋಗಿಸಲಾಗುತ್ತಿದೆ.
- Advertisement -