- Advertisement -
- Advertisement -
ಮುಂಬೈ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬೇರೆ ಬೇರೆ ಕಡೆಗಳಿಂದ ಜನ ನೆರವಿನ ಹಸ್ತ ಚಾಚುತ್ತಿದ್ದಾರೆ. ಹೀಗಿರುವಾಗಲೇ ಬಾಲಿವುಡ್ ನಟ, ಉದ್ಯಮಿ ಮನೀಶ್ ಮುಂದ್ರಾ ಪ್ರವೀಣ್ ಕುಟುಂಬಕ್ಕೆ ನೆರವಾಗಿರೋದಾಗಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಿಸಲು 11 ಲಕ್ಷ ನೀಡಿರುವುದಾಗಿ ಹೇಳಿದ್ದಾರೆ.ಇನ್ನು ಪ್ರವೀಣ್ ತಾಯಿಯನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಅವರು ನಾವು ನಿಮಗಾಗಿ ಮನೆ ನಿರ್ಮಿಸುತ್ತೇವೆ ಅಮ್ಮಾ.. ಪ್ರವೀಣ್ ಇಲ್ಲದಿರಬಹುದು ಆದ್ರೆ ನೀವು ಒಂಟಿ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.ಇದು ಹಿಂದೂ ಸಹೋದರರಿಗೆ ನಾವು ಮಾಡಬಹುದಾದ ಕಿಂಚಿತ್ತೂ ಸಹಾಯ ಎಂದಿದ್ದಾರೆ.
- Advertisement -