- Advertisement -
- Advertisement -
ಮಂಗಳೂರು: ಕಾರ್ಮಿಕರ ಇ-ನೋಂದಣಿಯಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಮಂಗಳೂರು ಕೆಎಸ್ಆರ್ಟಿಸಿ ವಿಭಾಗಕ್ಕೆ ಕಾರ್ಮಿಕರ ಭವಿಷ್ಯ ನಿಧಿ ಇಲಾಖೆಯು ರಾಷ್ಟ್ರೀಯ ಪ್ರಶಸ್ತಿ ಪ್ರಕಟಿಸಲಾಗಿದೆ.
ಈ ಪ್ರಶಸ್ತಿಗೆ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ಮೂರು ಸಂಸ್ಥೆಗಳ ಪೈಕಿ ಮಂಗಳೂರು ಕೆಎಸ್ಆರ್ಟಿಸಿ ವಿಭಾಗವೂ ಒಂದು. ಇಂದು ದೆಹಲಿಯಲ್ಲಿ ನಡೆಯುವ ವರ್ಚುವಲ್ ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಸಚಿವರು ಪ್ರಶಸ್ತಿ ಪ್ರದಾನ ನೆರವೇರಿಸುವರು.
ಸೀಮಿತ ಅವಧಿಯಲ್ಲಿ ಅತ್ಯಧಿಕ ಕಾರ್ಮಿಕರನ್ನು ಇ-ನೋಂದಣಿ ಮಾಡುವ ಮೂಲಕ ಈ ಸಾಧನೆ ಮಾಡಲಾಗಿದೆ.
- Advertisement -