Tuesday, April 30, 2024
Homeಕರಾವಳಿಮಂಗಳೂರು: ಬಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ; ಪೊಲೀಸ್ ಸಿಬ್ಬಂದಿ ಅಮಾನತು

ಮಂಗಳೂರು: ಬಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ; ಪೊಲೀಸ್ ಸಿಬ್ಬಂದಿ ಅಮಾನತು

spot_img
- Advertisement -
- Advertisement -

ಮಂಗಳೂರು: ಇಲ್ಲಿನ ತಣ್ಣೀರುಬಾವಿ ಬೀಚ್‌ ಬಳಿ ಬಾಲಕನೊಬ್ಬನಿಗೆ ಲಾಠಿಯೇಟು ಕೊಟ್ಟು ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್‌ ಅವರು ಹೇಳಿದ್ದಾರೆ.

ಹೊಸ ವರ್ಷದ ಆರಂಭದ ದಿನ ತಣ್ಣೀರುಬಾವಿ ಬೀಚ್‌ ಬಳಿ ವಾಹನ ದಟ್ಟಣೆ ಜಾಂ ಆಗಿತ್ತು. ಪಣಂಬೂರು ಪೊಲೀಸರು ಕರ್ತವ್ಯದಲ್ಲಿದ್ದು, ಟ್ರಾಫಿಕ್‌ ನಿಯಂತ್ರಣಕ್ಕೆ ಪರದಾಡುತ್ತಿದ್ದರು ಎನ್ನಲಾಗಿದೆ. ಇದರ ನಡುವೆ ವಿಜಯೋತ್ಸವ ಯುವಕರ ಮೆರವಣಿಗೆ ಬಂದಾಗ ಈ ಘಟನೆ ನಡೆದಿದೆ. ಬಾಲಕನಿಗೆ ಹೊಡೆದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಸಂಬಂಧ ವಿಡಿಯೋಗಳು ವೈರಲ್‌ ಆಗಿತ್ತು.

ಪಣಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಲಾಠಿ ಚಾರ್ಜ್ ಘಟನೆಯ ಸಂಬಂಧ ಪೊಲೀಸ್‌ ಪೇದೆ ಸುನೀಲ್‌ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಪೋಷಕರು ಹಾಗು ಹುಡುಗರಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಕಮಿಷನರ್‌ ಹೇಳಿದರು.

- Advertisement -
spot_img

Latest News

error: Content is protected !!