- Advertisement -
- Advertisement -
ಚಿತ್ರದುರ್ಗ: ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಚಿತ್ರದುರ್ಗದ ಕಲ್ಲಿನ ಕೋಟೆಯ ಗೋಡೆ ಏರಿದ್ದಾರೆ.
ಏಳು ಸುತ್ತಿನ ಕೋಟೆಯಲ್ಲಿ ಕಲ್ಲಿನ ಗೋಡೆ ಏರಿರುವ ಶಶಿಕುಮಾರ್ ವೀಡಿಯೋ ಅನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಂಕಿಮ್ಯಾನ್ ಜ್ಯೋತಿರಾಜ್ ಕೂಡಾ ಹಿಂದೆ ಕಲ್ಲಿನ ಗೋಡೆ ಏರಿದ್ದರು.
ಹಾಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿರುವ ಐಪಿಎಸ್ ಅಧಿಕಾರಿ ಶಶಿಕುಮಾರ್ ಮೂಲತ: ಚಿತ್ರದುರ್ಗ ಜಿಲ್ಲೆಯವರಾಗಿದ್ದಾರೆ. ಆಗಾಗ ಸಾರ್ವಜನಿಕ ವೇದಿಕೆಗಳಲ್ಲಿ ಹಾಡುವ ಮೂಲಕ ಗಮನ ಸೆಳೆಯುತ್ತಿದ್ದ ಪೋಲಿಸ್ ಕಮಿಷನರ್ ಈಗ ತಮ್ಮ ತವರು ಜಿಲ್ಲೆಯಲ್ಲಿ ಕಲ್ಲಿನ ಕೋಟೆ ಏರಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
- Advertisement -