Saturday, June 28, 2025
Homeಅಪರಾಧಬೆಳ್ತಂಗಡಿಯಲ್ಲಿ ಧರ್ಮಸ್ಥಳ ಸಂಘದಿಂದ ತೆಗೆದ ಸಾಲದ ಹಣವನ್ನೇ ಎಗರಿಸಿದ ಕಳ್ಳ

ಬೆಳ್ತಂಗಡಿಯಲ್ಲಿ ಧರ್ಮಸ್ಥಳ ಸಂಘದಿಂದ ತೆಗೆದ ಸಾಲದ ಹಣವನ್ನೇ ಎಗರಿಸಿದ ಕಳ್ಳ

spot_img
- Advertisement -
- Advertisement -

ಬೆಳ್ತಂಗಡಿ ಇಲ್ಲಿನ ನೆರಿಯಾ ಎಂಬಲ್ಲಿ ಮಹಿಳೆಯೊಬ್ಬರು ಧರ್ಮಸ್ಥಳ ಸಂಘದಿಂದ ತೆಗೆದ ಸಾಲವನ್ನೇ ಕಳ್ಳರು ಕದ್ದಿರುವ ಘಟನೆ ನಡೆದಿದೆ.

ನೆರಿಯಾ ಗ್ರಾಮದ ಕುಲೆನಾಡಿ ನಿವಾಸಿ ಚಂದ್ರಾವತಿ ಅವರು ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಗುಂಪಿನಿಂದ ರೂ 2,47,000  ಸಾಲವನ್ನು ಪಡೆದಿದ್ದರು. ಅದರಲ್ಲಿ  ಪೈಕಿ ರೂ.65,000/- ಹಣವನ್ನು  ತಮ್ಮ ಮನೆಯ ಮಲಗುವ ಕೊಠಡಿಯಲ್ಲಿರುವ ಬೀರುವಿನಲ್ಲಿ ಇಟ್ಟಿದ್ದರು,  ಇದೇ  ಬೀರುವಿನಲ್ಲಿ 06-09-2021 ರಂದು ಆಭರಣ ಇಡುವ ಪೆಟ್ಟಿಗೆಯಲ್ಲಿ 24 ಗ್ರಾಂ ತೂಕದ ಚಿನ್ನದ ನೆಕ್ಲೇಸ್‌ -1 ಹಾಗೂ ಚಿನ್ನದ ಸರವನ್ನು ಇಟ್ಟಿದ್ದರು. ಆದರೆ 08-03-2022 ರಂದು ಬೆಳಿಗ್ಗೆ 09.00 ಗಂಟೆ ವೇಳೆಗೆ ಹಣ ತೆಗೆಯಲು ಹೋದಾಗ  ಬೀರುವಿನಲ್ಲಿ ಇಟ್ಟಿದ್ದ  ಹಣ ಹಾಗೂ ಚಿನ್ನ ಎರಡೂ ಕಳವಾಗಿರೋದು ಗೊತ್ತಾಗಿದೆ.  

ಅಲ್ಲದೇ ಮನೆಯವರು ಮನೆಗೆ ಬರುತ್ತಿದ್ದ ಚಂದ್ರಾವತಿ ಅವರ ಬಾವನ ಮಗ ಸಚಿನ್‌  ಮೇಲೆ ಸಂದೇಹ ವ್ಯಕ್ತಪಡಿಸಿದ್ದಾರೆ. ಬಳಿಕ ಧರ್ಮಸ್ಥಳ ಠಾಣೆಯಲ್ಲಿ ಆತನ ಮೇಲೆ ದೂರು ನೀಡಿದ್ದು ಅದರಂತೆ ಠಾಣೆಯಲ್ಲಿ ಸಚಿನ್.ಕೆ.ಆರ್ ಮೇಲೆ ಕಲಂ 454,457,380 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನೂ ಆರೋಪಿ ಸಚಿನ್ ಕೆ.ಆರ್ ನೆರಿಯಾ ಗ್ರಾಮ ಪಂಚಾಯತ್ ಸದಸ್ಯನಾಗಿದ್ದು, ಆತನನ್ನು ಠಾಣೆಗೆ ಕರೆಸಿ ನಂತರ ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!