- Advertisement -
- Advertisement -
ಮಂಗಳೂರು :ನೇತ್ರಾವತಿ ನದಿಯಲ್ಲಿ ದೋಣಿ ಮಗುಚಿ ಬಿದ್ದು, ಕಾರ್ಮಿಕನೋರ್ವ ನಾಪತ್ತೆಯಾದ ಘಟನೆ ನಗರದ ಅಡ್ಯಾರ್-ಹರೇಕಳ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ರಾಜ್ (50) ನಾಪತ್ತೆಯಾದ ಕಾರ್ಮಿಕ.
ರಾಜ್ ಮತ್ತು ಇತರ ಇಬ್ಬರು ಕಾರ್ಮಿಕರು ಡ್ಯಾಮ್ನ ಕೆಳಭಾಗದಲ್ಲಿ ತುಂಬಿದ ನೀರಿನಲ್ಲಿ ಅನುಮತಿ ಇಲ್ಲದೆ ಮರಳುಗಾರಿಕೆ ನಡೆಸುತ್ತಿದ್ದರು. ಈ ವೇಳೆ ದೋಣಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ನೀರಿನ ಹರಿವಿನಲ್ಲಿ ರಾಜ್ ನಾಪತ್ತೆಯಾದರೆ, ಇನ್ನಿಬ್ಬರು ಈಜಿಕೊಂಡು ದಡ ಸೇರಿದ್ದಾರೆ.ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ.
- Advertisement -