- Advertisement -
- Advertisement -
ನವದೆಹಲಿ: ನಾಯಿಯೊಂದು ಸದಾ ಬೊಗಳುತ್ತಿತ್ತು ಎಂಬ ಕಾರಣಕ್ಕೆ ಪಾಪಿಯೊಬ್ಬ ನಾಯಿಯನ್ನು ಇರಿದು ಕೊಂದಿರುವ ಘಟನೆ ನವದೆಹಲಿಯ ಕಲ್ಯಾಣಪುರಿ ಪ್ರದೇಶದಲ್ಲಿ ನಡೆದಿದೆ.
ನಾಯಿ ಸದಾ ಬೊಗಳುತ್ತಿತ್ತು ಎಂಬ ಕಾರಣಕ್ಕೆ ಕೋಪಗೊಂಡು ಆ ನಾಯಿಯನ್ನು ಕೊಂದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ರಾತ್ರಿ ವೇಳೆ ಜೋರಾಗಿ ಬೊಗಳುತ್ತಿದ್ದ ಬೀದಿ ನಾಯಿಯಿಂದ ಮನೆಯೊಳಗೆ ನೆಮ್ಮದಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ. ಹಗಲು ಹೊತ್ತಿನಲ್ಲೂ ರಸ್ತೆಯಲ್ಲಿ ಯಾರಾದರೂ ಓಡಾಡಿದರೆ ನಾಯಿ ಬೊಗಳಲು ಶುರು ಮಾಡುತ್ತಿತ್ತು. ಇದರಿಂದ ಆ ನಾಯಿಯನ್ನು ಕೊಂದಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
- Advertisement -