ತೆಲಂಗಾಣ: ಇಲ್ಲಿನ ಪೊಲೀಸ್ ಕಂಟ್ರೋಲ್ ರೂಂಗೆ ಮಧ್ಯರಾತ್ರಿ ಇಲ್ಲಿನ ನಲ್ಗೊಂಡದ ಕಣಗಲ್ನ ಚೇರ್ಲ ಗೌರಾರಾಮ ಗ್ರಾಮದ ನವೀನ್ ಎಂಬ ವ್ಯಕ್ತಿ 6 ಬಾರಿ ಕರೆ ಮಾಡಿದ್ದಾನೆ. ಕರೆ ಸ್ವೀಕರಿಸಿದ ಪೊಲೀಸ್ ಸಿಬ್ಬಂದಿ ಏನು ಸಮಸ್ಯೆ ಎಂದು ವಿಚಾರಿಸಿದ್ದಾರೆ. ಆಗ ಆತ ಒಂದೇ ಸಮನೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಕೊನೆಗೆ ಗದರಿಸಿ ವಿಷ್ಯಾ ಏನು ಎಂದು ಕೇಳಿದಾಗ ಪುಣ್ಯಾತ್ಮ ಬಾಯಿ ಬಿಟ್ಟಿದ್ದಾನೆ.
ಆತ ನೀಡಿದ ಕಾರಣ ಕೇಳಿ ಕೊನೆಗೆ ಪೊಲೀಸರೇ ಸುಸ್ತಾಗಿ ಹೋಗಿದ್ದಾರೆ. ಕಂಠ ಪೂರ್ತಿ ಕುಡಿದಿದ್ದ ನವೀನ್ ತನ್ನ ಪತ್ನಿ ಬಗ್ಗೆ ದೂರು ಹೇಳಿದ್ದಾನೆ. ಆಕೆ ಮಟನ್ ಕರ್ರಿ ಮಾಡುತ್ತಿಲ್ಲ, ನಾನು ಕೇಳಿದಾಗಲೆಲ್ಲ ನಾನ್ ವೆಜ್ ಮಾಡುತ್ತಿಲ್ಲ ಅಂತ ದೂರು ಕೊಟ್ಟಿದ್ದಾನೆ. ನನಗೆ ಅನ್ಯಾಯವಾಗಿದೆ, ನನಗೆ ನ್ಯಾಯ ಕೊಡಿಸಿ, ಆಕೆಯನ್ನು ಅರೆಸ್ಟ್ ಮಾಡಿ ಅಂತ ಗೋಳಾಡಿದ್ದಾನೆ.
ಈತನ ಗೋಳು ನೋಡಲಾರದ ಪೊಲೀಸರು ಮರುದಿನ ಮನೆಗೇ ಹೋಗಿ ಅರೆಸ್ಟ್ ಮಾಡಿದ್ದಾರೆ. ಈ ವೇಳೆ ನವೀನ್ ಪತ್ನಿ ಆತನ ಸಾಧನೆಯನ್ನೆಲ್ಲಾ ಪೊಲೀಸರ ಬಳಿ ಹೇಳಿದ್ದಾಳೆ. ಬಳಿಕ ಆತನನ್ನು ಪೊಲೀಸರು ಠಾಣೆಗೆ ಕರೆ ತಂದು ಭರ್ಜರಿ ಮಟನ್ ಊಟ ಹಾಕಿಸಿದ್ದಾರೆ.