- Advertisement -
- Advertisement -
ವಿಟ್ಲ : ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಟ್ಲದ ಕಾಶಿಮಠದ ಕೊಪ್ಪಳದಲ್ಲಿ ನಡೆದಿದೆ. ಸಂಜೀವ್ ಶೆಟ್ಟಿ(65) ಮೃತ ದುರ್ದೈವಿ.
ರಾತ್ರಿ ಎಂದಿನಂತೆ ಸಂಜೀವ ಶೆಟ್ಟಿ ಮಲಗಿದ್ದರು. ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಮನೆಯ ಹಿಂಬದಿಯಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
- Advertisement -