- Advertisement -
- Advertisement -
ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯ ಸಭೆಯ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ, ಜು.21 ರಂದು ನಡೆಯಲಿರುವ ಪುಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪುಮಾಣ ವಚನ ಸ್ವೀಕರಿಸಲು ನವ ದೆಹಲಿಗೆ ತೆರಳಿದ ಶ್ರೀ ಕ್ಷೇತ್ರ ಧರ್ಮಸ್ಥಳಧರ್ಮಾಧಿಕಾರಿಯನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್,ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ ನಾವೂರು ಶ್ರೀನಿವಾಸ ರಾವ್ ಧರ್ಮಸ್ಥಳ ಜೊತೆಗೆ ಇದ್ದರು.
ಜು.21 ರಂದು 11 ಗಂಟೆಗೆ ಸರಿಯಾಗಿ ಪ್ರಮಾಣ ವಚನ ಸ್ವೀಕರಸಲಿರುವ ಹಿನ್ನೆಲೆ ಧರ್ಮಸ್ಥಳದಿಂದ
ಹೊರಟ ಪೂಜ್ಯರು ಇದೀಗ 8.30 ರ ಸುಮಾರಿಗೆ ಬಂದಿಳಿದರು ಎಂದು ತಿಳಿದು ಬಂದಿದೆ.
- Advertisement -