Tuesday, May 21, 2024
Homeಕರಾವಳಿಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಲೋಕಾಯಕ್ತ ನ್ಯಾಯಮೂರ್ತಿ :ದೇವರ ದರ್ಶನ ಬಳಿಕ ಧರ್ಮಾಧಿಕಾರಿ ಭೇಟಿ

ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಲೋಕಾಯಕ್ತ ನ್ಯಾಯಮೂರ್ತಿ :ದೇವರ ದರ್ಶನ ಬಳಿಕ ಧರ್ಮಾಧಿಕಾರಿ ಭೇಟಿ

spot_img
- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕರ್ನಾಟಕ ಲೋಕಾಯಕ್ತ ನ್ಯಾಯಮೂರ್ತಿ ಶ್ರೀ.ಬಿ.ಎಸ್.ಪಾಟೀಲ್ , ಪತ್ನಿ ಶೋಭಾ ಪಾಟೀಲ್ ಜ.7 ರಂದು ಸಂಜೆ ಆಗಮಿಸಿ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಮಾಡಿದ್ದರು. ಜ.8 ರಂದು (ಇಂದು) ಬೆಳಗ್ಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡ ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬಳಿಕ ಮಧ್ಯಮಗಳೊಂದಿಗೆ ಮಾತಾನಾಡಿದ ನ್ಯಾಯಮೂರ್ತಿ ಶ್ರೀ.ಬಿ.ಸಿ.ಪಾಟೀಲ್ ನಾನು ಕರ್ತವ್ಯದ ನಿಮಿತ್ತ ಬಂದಿರುತ್ತೇನೆ ಹಾಗೆ ದೇವರ ದರ್ಶನ ಪಡೆದುಕೊಂಡು ಧರ್ಮಾಧಿಕಾರಿಯನ್ನು ಭೇಟಿ ಮಾಡಿದ್ದೇನೆ‌. ಒಳ್ಳೆಯ ವಾತಾವರಣ  ತುಂಬಾ ಸಂತೋಷವಾಯಿತು. ಲೋಕಾಯಕ್ತ ಸಂಸ್ಥೆಯ ಆಕ್ಟ್ ಅಡಿಯಲ್ಲಿ ನಾನು ಹಾಗೂ ಅಧಿಕಾರಿಗಳು ಟ್ರ್ಯಾಪ್ , ರೈಡ್ ಮಾಡುತ್ತಿದ್ದೇವೆ. ಹೊಸ ವರ್ಷಕ್ಕೆ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.

ಲೋಕಾಯಕ್ತ ನ್ಯಾಯಮೂರ್ತಿ ಆಗಮಿಸುವ ವೇಳೆ ಧರ್ಮಸ್ಥಳದ ಮ್ಯಾನೇಜರ್ ಪಾರ್ಶ್ವನಾಥ್, ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸರು, ದಕ್ಷಿಣ ಕನ್ನಡ ಮತ್ತು ಉಡುಪಿ ಲೋಕಾಯಕ್ತ ಎಸ್ಪಿ ಲಕ್ಷ್ಮೀ ಗಣೇಶ್ , ಎಸ್ಪಿ ಸೈಮಾನ್, ಡಿವೈಎಸ್ಪಿ ಕಲಾವತಿ , ಡಿವೈಎಸ್ಪಿ ಚೆಲುವರಾಜ್ ಮತ್ತು ತಂಡದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!