- Advertisement -
- Advertisement -
ಕಡಬ: ವಿದ್ಯುತ್ ಕಂಬದಿಂದ ಶಾಕ್ ಹೊಡೆದು ಎಸೆಯಲ್ಪಟ್ಟು ಲೈನ್ ಮ್ಯಾನ್ ಗೆ ಗಾಯವಾಗಿರುವ ಘಟನೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ನಡೆದಿದೆ. ಮೆಸ್ಕಾಂ ಲೈನ್ ಮ್ಯಾನ್ ನಾರಾಯಣ ಗಾಯಗೊಂಡವರು.
ಮೆಸ್ಕಾಂ ಲೈನ್ ಮ್ಯಾನ್ ನಾರಾಯಣ ಎಂಬವರು ಚಾರ್ವಾಕದ ಎಣ್ಮೂರಿನಲ್ಲಿ ವಿದ್ಯುತ್ ಟ್ರಾನ್ಸಾ ಫರ್ಮರ್ ನಲ್ಲಿ ಕೆಲಸ ಮಾಡುವಾಗ ವಿದ್ಯುತ್ ಶಾಕ್ ಗೆ ಒಳಗಾಗಿ ಕಂಬದಿಂದ ಎಸೆಯಲ್ಪಟ್ಟಿದ್ದಾರೆ.ಕೂಡಲೇ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕೈ ಮೂಳೆಗೆ ಗಾಯವಾಗಿದೆ ಎನ್ನಲಾಗಿದೆ.
- Advertisement -