Saturday, June 28, 2025
Homeಕರಾವಳಿಪುತ್ತೂರಿನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಜೀವ ಬೆದರಿಕೆ : ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಉದ್ಯಮಿ

ಪುತ್ತೂರಿನಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಜೀವ ಬೆದರಿಕೆ : ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಉದ್ಯಮಿ

spot_img
- Advertisement -
- Advertisement -

ಪುತ್ತೂರು: ಉದ್ಯಮಿಯೊಬ್ಬರ ಮನೆಗೆ ಹಾಡಹಗಲೇ ಅಕ್ರಮವಾಗಿ ಪ್ರವೇಶಿಸಿ ಹಣಕ್ಕೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ ಹಿಂದಾರ್ ಭಾಸ್ಕರ್ ಆಚಾರ್ ಎಂಬವರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಮರೀಲ್ ನ ವಿಜಯ ಶೇಣವ ಹಾಗೂ 6 ಜನರ ತಂಡ ನೀನು ನನಗೆ ಡುಡ್ಡು ಕೊಡಲು ಬಾಕಿ ಇದೆ.ಈಗಲೇ ಕೊಡಬೇಕು. ಇಲ್ಲದಿದ್ದರೆ ಅಪಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಭಯಗೊಂಡ ಹಿಂದಾರ್ ಭಾಸ್ಕರ್ ಆಚಾರ್ ಅವರು ಮನೆಯ ಹೊರಗಿದ್ದ ಕೆಲಸದವರನ್ನು ಕರೆಯಲು ಮುಂದಾದಾಗ ಅಡ್ಡಿಪಡಿಸಿದ ವಿಜಯ ಶೇಣವ ಹಾಗೂ ತಂಡದವರು ಯಾರಿಗಾದರೂ ಈ ವಿಚಾರವನ್ನು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಹಿಂದಾರ್ ಭಾಸ್ಕರ್ ಆಚಾರ್ ಅವರು ನಾನು 18 ವರ್ಷಗಳ ಹಿಂದೆ ವಿಜಯ್ ಶೇಣವ ಎಂಬವರು ಮರೀಲ್ ನಲ್ಲಿ ನಿರ್ಮಿಸಿದ ಮನೆಯ ಕೆಲಸವನ್ನು ಮಾಡಿದ್ದೆ. ಆದರೆ ನಾನು ಯಾವುದೇ ರೀತಿಯ ಮೊತ್ತವನ್ನು ಅವರಿಗೆ ಬಾಕಿ ನೀಡಲು ಇರುವುದಿಲ್ಲ. ನನ್ನ ಹಾಗೂ ಅವರ ನಡುವೆ ಯಾವುದೇ ರೀತಿಯ ಹಣದ ವ್ಯವಹಾರವಿಲ್ಲ. ಏಕಾಏಕಿ ಮನೆಗೆ ನುಗ್ಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಸೆಕ್ಷನ್ 143, 447, 448, 504, 506, 341, RW 149ರ ಅಡಿಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!