Sunday, May 12, 2024
Homeಕರಾವಳಿಉಡುಪಿಕುಂದಾಪುರದಲ್ಲಿ ಲವ್ ಜಿಹಾದ್ ಗೆ ಯುವತಿ ಬಲಿಯಾದ ಪ್ರಕರಣ: ಮೃತ ಶಿಲ್ಪಾ ದೇವಾಡಿಗ ಬರೆದ ಪತ್ರ...

ಕುಂದಾಪುರದಲ್ಲಿ ಲವ್ ಜಿಹಾದ್ ಗೆ ಯುವತಿ ಬಲಿಯಾದ ಪ್ರಕರಣ: ಮೃತ ಶಿಲ್ಪಾ ದೇವಾಡಿಗ ಬರೆದ ಪತ್ರ ಪತ್ತೆ

spot_img
- Advertisement -
- Advertisement -

ಉಡುಪಿ: ಕುಂದಾಪುರದಲ್ಲಿ ಮುಸ್ಲಿಂ ಯುವಕನ ಮೋಸದ ಜಾಲಕ್ಕೆ ಬಲಿಯಾದ ಯುವತಿ ಶಿಲ್ಪಾ ದೇವಾಡಿಗ ಬರೆದ ಪತ್ರವೊಂದು ಇದೀಗ ಪತ್ತೆಯಾಗಿದ್ದು, ತನ್ನ ಪ್ರೀತಿ ಬಗೆಗಿನ ಒಂದಷ್ಟು ವಿಚಾರಗಳನ್ನು ಆಕೆ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.


ಕೋಟೇಶ್ವರದ ಅಜೀಜ್(32) ಮತ್ತು ಉಪ್ಪಿನಕುದ್ರು ಗ್ರಾಮದ ನಿವಾಸಿ ಶಿಲ್ಪಾ(25) ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ-ಪ್ರೇಮ ಇಬ್ಬರ ನಡುವೆ ದೈಹಿಕ ಸಂಪರ್ಕಕ್ಕೂ ಕಾರಣವಾಗಿತ್ತು. ಹೀಗಾಗಿ ಶಿಲ್ಪಾ ಅಜೀಜ್ ಬಳಿ ತನ್ನನ್ನು ವಿವಾಹವಾಗುವಂತೆ ಒತ್ತಾಯಿಸುತ್ತಿದ್ದಳು.ಆದರೆ ಅಜೀಜ್ ಅದಕ್ಕೆ ಒಪ್ಪಿರಲಿಲ್ಲ. ಆತ ಆಕೆಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದೇ ನೋವಲ್ಲಿ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದೀಗ ಆಕೆ ಬರೆದಿದ್ದಾಳೆ ಎನ್ನಲಾದ ಪತ್ರವೊಂದು ದೊರೆತಿದ್ದು, ಅದರಲ್ಲಿ ಸುದೀರ್ಘ ವಾಗಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಕವನದ ರೂಪದಲ್ಲಿ ಬರೆದಿದ್ದಾರೆ, ಕೇವಲ ಬಾಹ್ಯ ಸೌಂದರ್ಯ ಕ್ಕಾಗಿ ನಿಮ್ಮನ್ನು ಪ್ರೀತಿಸುತ್ತಾರೆ. ಟೈಮ್ ಪಾಸ್ ಮಾಡಲು ಮಾತ್ರ ನಿಮ್ಮನ್ನು ಪ್ರೀತಿಸುವ ನಾಟಕವಾಡುತ್ತಾರೆ. ಎಲ್ಲವನ್ನೂ ಮಾಡುತ್ತಾರೆ ಆದರೆ ನಿಮಗೆ ಐ ಹೇಟ್ ಯು ಅನ್ನುತ್ತಾರೆ. ಹೀಗೆ ಅಜೀಜ್ ಮತ್ತು ತನ್ನ ನಡುವೆ ನಡೆದಿರುವ ಘಟನೆಗಳನ್ನು ಕವನ ರೂಪದಲ್ಲಿ ಶಿಲ್ಪಾ ಬರೆದಿದ್ದಾಳೆ.

- Advertisement -
spot_img

Latest News

error: Content is protected !!