Tuesday, June 23, 2026
Homeಚಿಕ್ಕಮಗಳೂರುಚಿಕ್ಕಮಗಳೂರು :ಇಬ್ಬರ ಮೇಲೆ ದಾಳಿ ಮಾಡಿ ಒಬ್ಬರನ್ನು ಬಲಿ ಪಡೆದ ಚಿರತೆ ಗುಂಡೇಟಿಗೆ ಬಲಿ; ಪ್ರಾಣಿಪ್ರಿಯರು...

ಚಿಕ್ಕಮಗಳೂರು :ಇಬ್ಬರ ಮೇಲೆ ದಾಳಿ ಮಾಡಿ ಒಬ್ಬರನ್ನು ಬಲಿ ಪಡೆದ ಚಿರತೆ ಗುಂಡೇಟಿಗೆ ಬಲಿ; ಪ್ರಾಣಿಪ್ರಿಯರು ಹಾಗೂ ಪರಿಸರವಾದಿಗಳು ಆಕ್ರೋಶ

- Advertisement -
- Advertisement -

ಚಿಕ್ಕಮಗಳೂರು :ಚಿರತೆ ಸೆರೆ ವೇಳೆ ಆತ್ಮರಕ್ಷಣೆಗೆಂದು ಅಧಿಕಾರಿಗಳು ಹಾರಿಸಿದ ಗುಂಡಿನಿಂದ ಚಿರತೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಭೈರಾಪುರ ಗ್ರಾಮದಲ್ಲಿ ನ.30 ರಂದು ನಡೆದಿದೆ.

ಇದು ಅಧಿಕಾರಿಗಳೇ ಮಾಡಿದ ಕೊಲೆ ಎಂದು ಪ್ರಾಣಿಪ್ರಿಯರು ಹಾಗೂ ಪರಿಸರವಾದಿಗಳು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನ.29 ರಂದು ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಮನೆ ಬಳಿಯಿದ್ದ 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿತ್ತು. ತೀವ್ರ ಗಾಯಗೊಂಡಿದ್ದ ಬಾಲಕನನ್ನು ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.11 ವರ್ಷದ ಬಾಲಕನ ಪ್ರಾಣಾಪಾಯದಿಂದ ಪಾರಾಗಿದ್ದನು. ಆದರೆ, ಚಿರತೆಯ ಸೆರೆಗೆ ಅರಣ್ಯ ಇಲಾಖೆ ಮುಂದಾಗಿತ್ತು.

ನ.30 ರಂದು ಬೈರಾಪುರ ಗ್ರಾಮದಲ್ಲಿ ಚಿರತೆ ಇರುವುದನ್ನ ಖಚಿತ ಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೇರಿಗೆ ಮುಂದಾಗಿದ್ದರು. ಈ ವೇಳೆ ಗಿಡ-ಘಂಟಿಗಳ ಮಧ್ಯೆಯಿಂದ ಚಿರತೆ ಹಾರಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಆತ್ಮ ರಕ್ಷಣೆಗಾಗಿ ಚಿರತೆಯ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ ಚಿರತೆ ತಪ್ಪಿಸಿಕೊಂಡಿತ್ತು.

ಅಧಿಕಾರಿಗಳು ಚಿರತೆಗಾಗಿ ಹುಡುಕಾಡಿದ ಮೇಲೆ ಚಿರತೆಯ ಮೃತದೇಹ ದೂರದಲ್ಲಿಯೇ ಪತ್ತೆಯಾಗಿತ್ತು. ಚಿರತೆಯ ದೇಹದ ಮೇಲೆ ಗುಂಡಿನ ಗುರುತು ಇದ್ದು, ಇದು ಅಧಿಕಾರಿಗಳೇ ಮಾಡಿದ ಕೊಲೆ ಎಂದು ಸ್ಥಳೀಯರು, ಪ್ರಾಣಿ ಪ್ರಿಯರು ಹಾಗೂ ಪರಿಸರವಾದಿಗಳು ಆರೋಪಿಸಿದ್ದಾರೆ.

ಕಳೆದ ಒಂದು ವಾರದ ಹಿಂದಷ್ಟೇ ತರೀಕೆರೆ ತಾಲೂಕಿನ ಮುಂಡ್ರೆ ಗ್ರಾಮದ ಬಳಿ ಕೊಟ್ಟಿಗೆಯಲ್ಲಿದ್ದ 5 ವರ್ಷದ ಬಾಲಕಿಯನ್ನು ಚಿರತೆ ಹೊತ್ತೊಯ್ದಿತ್ತು. ನಿನ್ನೆ ಮತ್ತೊಬ್ಬ ಬಾಲಕನ ಮೇಲೆ ದಾಳಿ ಮಾಡಿದ್ದು ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ರೈತರು ಚಿರತೆ ಹಾವಳಿಯಿಂದ ಹೈರಾಣಾಗಿದ್ದರು

- Advertisement -

Latest News

error: Content is protected !!