- Advertisement -
- Advertisement -
ಮಂಗಳೂರು: ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಎದುರಿಗೆ ಸಿಕ್ಕಿದ ಕಾರ್ಯಕರ್ತ ಬಂಧುವೊಬ್ಬರ ಮಗುವಿಗೆ ಮಂಗಳೂರು ನಗರದ ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ತನ್ನ ಹೆಗಲಲ್ಲಿದ್ದ ಕೇಸರಿ ಶಾಲನ್ನು ತೊಡಿಸಿದರು.
ಈ ಕುರಿತು ಫೇಸ್ ಬುಕ್ ಬರೆದುಕೊಂಡಿರುವ ಶಾಸಕರು, ನನ್ನ ಕ್ರಿಯೆಗೆ ಪ್ರತಿಯಾಗಿ ಆ ಮಗು ನಮಸ್ಕರಿಸಿದ ರೀತಿ ಬಾಲ್ಯದಲ್ಲಿಯೇ ಯೋಗ್ಯ ಸಂಸ್ಕಾರ ಸಿಗುತ್ತಿರುವುದರ ಸಾಕ್ಷಿಯಾಗಿತ್ತು. ಮಕ್ಕಳಿಗೆ ಎಳವೆಯಲ್ಲಿಯೇ ಉತ್ತಮ ಸಂಸ್ಕಾರಯುಕ್ತ, ನೈತಿಕ ಶಿಕ್ಷಣ ನೀಡಿದರೆ ಭವಿಷ್ಯದ ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದಿದ್ದಾರೆ.
- Advertisement -