Friday, April 19, 2024
Homeಕರಾವಳಿಬೆಳ್ತಂಗಡಿ: ನೂತನ ವಕೀಲರ ಕಚೇರಿ ಉದ್ಘಾಟನೆ

ಬೆಳ್ತಂಗಡಿ: ನೂತನ ವಕೀಲರ ಕಚೇರಿ ಉದ್ಘಾಟನೆ

spot_img
- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ನೊರೋನಾ ಬಿಲ್ಡಿಂಗ್ ನಲ್ಲಿ ವಕೀಲರ ನೂತನ ಕಚೇರಿ ಜ.19ರಂದು ಉದ್ಘಾಟನೆಗೊಂಡಿತು.

ವಕೀಲರಾದ ನವೀನ್ ಬಿ.ಕೆ. ಎಂ,ವಿನಯ್ ಕುಮಾರ್ ಹಾಗೂ ಅನಂತ್ ಮೋಹನ ರಾವ್ ಯು.ಎಂ ಇವರ ನೂತನ ವಕೀಲರ ಕಛೇರಿ ಇದಾಗಿದ್ದು, ವಕೀಲರಾದ ಬಿ.ಕೆ.ಧನಂಜಯ ರಾವ್ ದೀಪ ಬೆಳಗಿಸಿ ಕಛೇರಿ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಎಸ್.ಕೆ.ಡಿ.ಆರ್.ಡಿ.ಪಿ ನಿವೃತ್ತ ಪ್ರಾದೇಶಿಕ ನಿರ್ದೆಶಕ ಕೆ.ಬೂದಪ್ಪ ಗೌಡ . ನವೀನ ಬಿ.ಕೆ ತಾಯಿ ಯಮುನ, ಪತ್ನಿ ಮತ್ತು ಮಕ್ಕಳು, ವಿನಯ್ ಎಂ ಕುಟುಂಬಸ್ಥರು, ವಕೀಲರುಗಳಾದ ಸಂತೋಷ್ ಕುಮಾರ್ ಶ್ರೀನಿವಾಸ ಗೌಡ, ದಿನೇಶ್ ಶೆಟ್ಟಿ, ರಾವ್ ಅಸೋಸಿಯೇಟ್ಸ್ ನ ಸಿಬ್ಬಂದಿ ವರ್ಗ, ಸಂಘದ ಅಧ್ಯಕ್ಷರಾದ ಪ್ರಸಾದ್ ಕೆ.ಎಸ್ ಹಾಗೂ ರತ್ನವರ್ಮ ಬುಣ್ಣು ಭಾಗವಹಿಸಿ ಶುಭಹಾರೈಸಿದರು.ವಕೀಲ ಮನೋಹರ ಕುಮಾರ್ ಇಳಂತಿಲ ಕಾರ್ಯಕ್ರಮ ನಿರ್ವಹಿಸಿದರು.

- Advertisement -
spot_img

Latest News

error: Content is protected !!