- Advertisement -
- Advertisement -
ಚಾರ್ಮಾಡಿ: ನಿರಂತರ ಮಳೆಯಿಂದಾಗಿ ಕೊಟ್ಟಿಗೆಹಾರ ಸಮೀಪದ ಬಿದಿರುತಳ ಬಳಿ ಹೆದ್ದಾರಿಯ ಬದಿ ಕುಸಿದಿದ್ದು ಭೂ ಕುಸಿತದ ಆತಂಕ ಎದುರಾಗಿದೆ . ಆದರೆ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ,
ರಸ್ತೆಯ ಬದಿಗೆ ತಡೆಗೋಡೆ ನಿರ್ಮಾಣವಾದ ಜಾಗದಲ್ಲೇ ಮಳೆಯ ನೀರು ನುಗ್ಗಿದ ಪರಿಣಾಮ ತಡೆಗೋಡೆ ಸಮೇತ ಮಣ್ಣು ಕುಸಿದಿದೆ. ರಾತ್ರಿಯ ಹೊತ್ತಲ್ಲಿ ಸಂಚಾರಕ್ಕೆ ಅನುಕೂಲ ಮಾಡಿ ಕೊಡಲಾಗಿದೆ. ಇನ್ನೂ ರಸ್ತೆ ಕುಸಿದ ಜಾಗದಲ್ಲಿ ಪ್ರಪಾತ ಇರುವುದರಿಂದ ವಾಹನ ಚಾಲಕರು ವಾಹನವನ್ನು ಬದಿಗೆ ತಂದರೆ ಆಪತ್ತು ಎದುರಾಗಬಹುದು ಹಾಗಾಗಿ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
- Advertisement -