- Advertisement -
- Advertisement -
ಸುಳ್ಯ: ದಕ್ಷಿಣಕನ್ನಡ, ಕೊಡಗು ಗಡಿಭಾಗದಲ್ಲಿ ಇಂದು ಕೂಡ ಭೂಕಂಪನದ ಅನುಭವವಾಗಿದ್ದು, ಮತ್ತೊಂದೆಡೆ ಭೂಕುಸಿತ ಆತಂಕ ಹೆಚ್ಚಿಸಿದೆ.
ಕಲ್ಲುಗುಂಡಿ ಮಠದ ಮೂಲೆ ಬಳಿಯ ನಿವಾಸಿ ತಾಜುದ್ದೀನ್ ಟರ್ಲಿ ಅವರ ಮನೆ ಹಿಂಬದಿ ಭೂಮಿ ಭೂಕಂಪನದ ವೇಳೆ ಬಿರುಕು ಬಿಟ್ಟಿದೆ. ಅಲ್ಲದೆ ಹಿಂಬದಿಯ ಬರೆ ಕುಸಿದು ಬಿದ್ದಿದೆ. ಇದರಿಂದ ಮನೆ ಮೇಲೆ ಬರೆ ಕುಸಿಯುವ ಆತಂಕ ಎದುರಾಗಿದೆ ಎನ್ನಲಾಗಿದೆ. ಇಂದು ಸಂಭವಿಸಿದ ಭೂಕಂಪದ ಕೇಂದ್ರ ಅರಂತೋಡು ಎಂಬುದಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
- Advertisement -